ರಾಯಬಾಗ ತಾಲೂಕಿನಾದ್ಯಂತ 20 ಪರೀಕ್ಷಾ ಕೇಂದ್ರಗಳಲ್ಲಿ 7148 ವಿದ್ಯಾರ್ಥಿಗಳು ಶಾಂತಿ ಸುವ್ಯವಸ್ಥೆಯಿಂದ ಮೊದಲನೇ ದಿನದ ಪರೀಕ್ಷೆ ಬರೆದರು.
ಇಂದಿನಿಂದ ಪ್ರಾರಂಭವಾದ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳನ್ನು ಶಿಕ್ಷಕರು ಹಲವು ಕಡೆ ವಿವಿಧ ರೀತಿಯಲ್ಲಿ ಸ್ವಾಗತಿಸಿಕೊಂಡರು.
ತಾಲೂಕಿನಾದ್ಯಂತ ಪರೀಕ್ಷೆಯು ಸುಗಮ ನಿರ್ವಹಣೆಗೆ ಆಸನ ವ್ಯವಸ್ಥೆ, ಸಿಸಿ ಟಿವಿ, ವೆಬಕಾಷ್ಟಿಂಗ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳು ಒದಗಿಸಲಾಗಿತ್ತು. ಪರೀಕ್ಷಾ ಕೇಂದ್ರಗಳ 200 ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಾಗಿದ್ದು, ಯಾವುದೇ ಅಕ್ರಮಗಳಿಗೆ ಅವಕಾಶ ನೀಡದಂತೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು ,
ವಿದ್ಯಾರ್ಥಿಗಳು ಭಯವಿಲ್ಲದೆ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿರುವ ಇಲಾಖೆ ಮತ್ತು ಶಾಂತಿಯುತವಾಗಿ ಪರೀಕ್ಷೆ ನಡೆಯಲು ಎಲ್ಲ ಸೂಕ್ತ ಕ್ರಮಗಳನ್ನು ಜರುಗಿಸಿದ್ದರು.
ಶಿಕ್ಷಣ ಸಂಯೋಜಕ ಮನೋಹರ ಪೂಜಾರಿ, ಕುಡಚಿ ಪಟ್ಟಣದ ಜುನ್ನೇದಿಯಾ ಪ್ರೌಢಶಾಲೆ ಕೇಂದ್ರ ಮುಖ್ಯಸ್ಥ ಐ.ಎನ.ಪಟೇಲ, ಸರ್ಕಾರಿ ಉರ್ದು ಪ್ರೌಢಶಾಲೆ ಕೇಂದ್ರದ ಮುಖ್ಯಸ್ಥ ಬಾಳಪರವೇಷ, ಎಮು.ಬಿ.ಬೇಗ, ಪರಮಾನೀದವಾಡಿ ಎಸ್.ಆರ.ಡಿ ಪ್ರೌಢಶಾಲೆ ಕೇಂದ್ರ ಮುಖ್ಯಸ್ಥ ದೊಡ್ಡಣ್ಣವರ ಪರೀಕ್ಷಾ ಕಾರ್ಯನಿರ್ವಹಿಸಿದರು
Laxmi News 24×7