Breaking News

ಬೈಲಹೊಂಗಲ: ಸಂಭ್ರಮದಿಂದ ನೆರವೇರಿದ ಮಲ್ಲಯ್ಯ ದೇವಸ್ಥಾನದ ಜಾತ್ರಾ ಮಹೋತ್ಸವ

Spread the love

ಬೈಲಹೊಂಗಲ: ಪಟ್ಟಣದ ಮರಡಿ ಗಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಭಾನುವಾರ ಸಂಭ್ರಮದಿಂದ ನೆರವೇರಿತು.

ಪಟ್ಟಣದ ಎತ್ತರ ಪ್ರದೇಶದಲ್ಲಿರುವ ದೇವಸ್ಥಾನದಲ್ಲಿ ಪದ್ಧತಿಯಂತೆ ಈ ವರ್ಷವೂ ಮರಡಿ ಗಲ್ಲಿ ಹಿರಿಯರು, ರೈತ ಕುಟುಂಬಸ್ಥರು ಮಲ್ಲಯ್ಯಸ್ವಾಮಿ ಪ್ರತಿಮೆಗೆ ಅಲಂಕಾರ, ಅಭಿಷೇಕ ಮಾಡಿ ಭಕ್ತಿಯಿಂದ ಪ್ರಾರ್ಥಿಸಿದರು.‌ ಮಲ್ಲಯ್ಯನ ಪ್ರತಿಮೆ ಎದುರು‌ ಕವಲ ಕಟ್ಟಿ ವರ ಕೇಳಿದರು.

ಬೈಲಹೊಂಗಲ: ಸಂಭ್ರಮದಿಂದ ನೆರವೇರಿದ ಮಲ್ಲಯ್ಯ ದೇವಸ್ಥಾನದ ಜಾತ್ರಾ ಮಹೋತ್ಸವ

ಮಳೆ, ಬೆಳೆ ಸಂಪನ್ನವಾಗಲಿ, ರೈತಾಪಿ ಕುಟುಂಬ, ನಾಡು ಸಮೃದ್ಧವಾಗಿರಲಿ ಎಂದು ಪ್ರಾರ್ಥಿಸಿದರು.

ಬೆಟ್ಟದಲ್ಲಿರುವ ಮಲ್ಲಯ್ಯನ‌ ದೇವಸ್ಥಾನಕ್ಕೆ ಬೆಳಿಗ್ಗೆಯಿಂದ ರಾತ್ರಿಯ ವರೆಗೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಹೂವು, ಹಣ್ಣು, ಕಾಯಿ, ಕರ್ಪೂರ, ನೈವೇದ್ಯ ಅರ್ಪಿಸಿದರು.


Spread the love

About Laxminews 24x7

Check Also

ಕೂಲಿ ಹಣ ಕೇಳಿದ್ದಕ್ಕೆ ಕಾಂಗ್ರೆಸ್‌ ಮುಖಂಡನಿಂದ ಬೆದರಿಕೆ ಆರೋಪ – ವ್ಯಕ್ತಿ ಆತ್ಮಹತ್ಯೆ

Spread the loveಕಲಬುರಗಿ: ಗುತ್ತಿಗೆ ಪಡೆದ ಕೆಲಸದ ಹಣ ಕೇಳಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮುಖಂಡನ ಬೆದರಿಕೆಗೆ ಹೆದರಿದ ವ್ಯಕ್ತಿ ಆತ್ಮಹತ್ಯೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ