Breaking News

ಇಂದಿನ ಪಂಚಾಂಗ ಹಾಗೂ ರಾಶಿ ಭವಿಷ್ಯ ಹೀಗಿದೆ..

Spread the love

 

ಇಂದಿನ ಪಂಚಾಂಗ:

ದಿನಾಂಕ : 29-10-2023, ಭಾನುವಾರ

ಸಂವತ್ಸರ : ಶುಭಕೃತ್

ಆಯನ: ದಕ್ಷಿಣಾಯಣ

ಋತು: ಹೇಮಂತ

ಮಾಸ: ಅಶ್ವಿನ್

ಪಕ್ಷ: ಕೃಷ್ಣ

ತಿಥಿ: ಪ್ರತಿಪದಾ

ನಕ್ಷತ್ರ: ಅಶ್ವಿನಿ

ಸೂರ್ಯೋದಯ: ಮುಂಜಾನೆ 06:11 ಗಂಟೆಗೆ

ಅಮೃತಕಾಲ: ಮಧ್ಯಾಹ್ನ 02:1156 ರಿಂದ 4:24 ಗಂಟೆ ತನಕ

ವರ್ಜ್ಯಂ : ಸಂಜೆ 06:15ರಿಂದ 07:50 ಗಂಟೆವರೆಗೆ

ದುರ್ಮುಹೂರ್ತ: ಸಾಯಂಕಾಲ 4:35ರಿಂದ 5:23 ಗಂಟೆ ತನಕ

ರಾಹುಕಾಲ: ಸಂಜೆ 04:24ರಿಂದ 5:51 ಗಂಟೆವರೆಗೆ

ಸೂರ್ಯಾಸ್ತ: ಸಂಜೆ 05:52 ಗಂಟೆಗೆ

ಇಂದಿನ ರಾಶಿ ಭವಿಷ್ಯ:

ಮೇಷ : ನಿಮ್ಮ ನಿಜವಾದ ಮೌಲ್ಯವೇನೆಂದು ನೀವು ಪ್ರದರ್ಶಿಸಲು ಇಂದು ಸೂಕ್ತವಾದ ದಿನದಂತೆ ಕಾಣುತ್ತದೆ. ಕೆಲಸದ ವಿಷಯದಲ್ಲಿ, ಮಹತ್ತರ ಪ್ರಸ್ತಾವನೆಗಳು ಮತ್ತು ಸೃಜನಶೀಲ ಆಲೋಚೆಗಳಿಂದ ನೀವು ಅತ್ಯಂತ ಉತ್ಸುಕರಾಗಿರುತ್ತೀರಿ. ವಿಷಯಗಳು ಸರಾಗವಾಗಿ ಮುನ್ನಡೆಯದ ತಾತ್ಕಾಲಿಕ ಹಂತವಿರಬಹುದು, ಆದರೆ ಅದರಿಂದ ನೀವು ಭರವಸೆ ಕಳೆದುಕೊಳ್ಳಬೇಕೆಂದು ಅರ್ಥವಲ್ಲ. ನಿಮ್ಮ ಜೀವನದಲ್ಲಿ ಪ್ರವೇಶಿಸುವ ಋಣಾತ್ಮಕತೆಯನ್ನು ಹೊರದೂಡುವಲ್ಲಿ ನೀವು ಯಶಸ್ವಿಯಾದರೆ ನಿರಾಶೆ ಶಾಶ್ವತ ಅತಿಥಿಯಲ್ಲ.

ವೃಷಭ : ಇಂದು ನಿಮ್ಮ ಹಣೆಬರಹ ಏನು ತರುತ್ತದೋ ಅದಕ್ಕೆ ನೀವು ಶರಣಾಗಬೇಕಾದ ದಿನವಾಗಬಹುದು. ಹಾಗೆ ಮಾಡುವಲ್ಲಿ, ನೀವು ನಿಮ್ಮ ದಿನ ಇತರೆ ಯಾವುದೇ ಒಂದು ದಿನದಂತೆ ಎಂದು ಭಾವಿಸಬಹುದು, ಹಾಗಿದ್ದಲ್ಲಿ ಭಯಪಡಬೇಕಾದ ಅಗತ್ಯವಿಲ್ಲ. ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳದೇ ಇರುವುದು ಉತ್ತಮ, ಏಕೆಂದರೆ ಅದು ತಪ್ಪಾಗುವ ಸಾಧ್ಯತೆಗಳಿವೆ.

ಮಿಥುನ : ನೀವು ಕೈಗೊಳ್ಳುವ ಯಾವುದೇ ಕೆಲಸ ಯಾವುದೇ ತಡವಿಲ್ಲದೆ ಯಶಸ್ವಿಯಾಗಿ ಪೂರ್ಣಗೊಳ್ಳಬೇಕು. ಆದರೆ ಅದಕ್ಕೆ, ನೀವು ನಿಮ್ಮ ಕೈಯಲ್ಲಿರುವ ಕೆಲಸವನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಕಲಿಯಬೇಕು. ನಿಮ್ಮ ಎಲ್ಲ ಪ್ರಯತ್ನಗಳಿಗೂ ಬಹಳ ಬೇಗನೆ ಪುರಸ್ಕಾರ ದೊರೆಯುವುದರಿಂದ ನೀವು ಸಂತೋಷಪಡುತ್ತೀರಿ.

ಕರ್ಕಾಟಕ : ನಿಮ್ಮ ದಾರಿಯಲ್ಲಿ ಹೊಸ ಜವಾಬ್ದಾರಿಗಳು ಬಂದಂತೆ, ನೀವು ನಿಮ್ಮನ್ನು ತೊಡಗಿಸಿಕೊಳ್ಳುತ್ತೀರಿ ಮತ್ತು ಅದರಿಂದ ಸುಸ್ತಾದ ಭಾವನೆ ಹೊಂದುತ್ತೀರಿ. ನೀವು ಮುನ್ನಡೆದಂತೆ ಒತ್ತಡವೂ ಉಂಟಾಗುವ ಸಾಧ್ಯತೆ ಇದೆ.

ಸಿಂಹ : ಇಂದು ನಿಮ್ಮ ನಿಜವಾದ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ನಿಮ್ಮ ಅಹ‍ಂ ನಿಮ್ಮನ್ನು ತಡೆಯದಂತೆ ನೋಡಿಕೊಳ್ಳಿ. ಪ್ರಣಯರೀತ್ಯಾ ತೊಡಗಿಕೊಳ್ಳಲು ಉತ್ತಮ ದಿನದಂತೆ ಕಾಣುತ್ತಿದೆ ಆದರೆ ನಿಮ್ಮ ಅಹಂ ಪಕ್ಕಕ್ಕೆ ಇರಿಸಿದ ನಂತರ ಮಾತ್ರ ಮುನ್ನಡೆಯಿರಿ.

ಕನ್ಯಾ : ಇಡೀ ದಿನ ಗೊತ್ತಿಲ್ಲದ ವಿಷಯಕ್ಕೆ ನಿಮ್ಮ ಮನಸ್ಸು ಭಯಗ್ರಸ್ತವಾಗಿರುತ್ತದೆ. ನಿಮ್ಮ ಮಿತ್ರರಲ್ಲಿ ಅತಿಯಾದ ಖರ್ಚು ಮಾಡುವ ಸನ್ನಿವೇಶಗಳಿಂದ ದೂರವಿರಿ. ಈ ದಿನ ನಿಮ್ಮಿಂದ ಕೊಂಚ ಜಾಗರೂಕತೆ ಅಗತ್ಯವಿದೆ.

ತುಲಾ : ರಿಯಲ್ ಎಸ್ಟೇಟ್ ಗಳು ಮತ್ತು ವಿಮಾ ಪಾಲಿಸಿಗಳಲ್ಲಿ ಹೂಡಿಕೆಗಳು ನಿಮಗೆ ಹಣವನ್ನು ತಂದುಕೊಡಲಿವೆ! ನಿಮ್ಮ ಮಕ್ಕಳು ಹೊಸ ಎತ್ತರಗಳನ್ನು ತಲುಪಲಿದ್ದು ನಿಮ್ಮ ಎದೆ ಹೆಮ್ಮೆಯಿಂದ ಬೀಗುತ್ತದೆ. ಕೆಲಸದ ವಿಷಯದಲ್ಲಿ, ವೇತನ ಹೆಚ್ಚಳ ನಿಮ್ಮ ದಾರಿಯಲ್ಲಿರುವುದನ್ನು ಗಮನಿಸಿ. ನಿಮ್ಮ ಪಿತ್ರಾರ್ಜಿತ ರೂಪದಲ್ಲಿ ಕೂಡಾ ಹಣಕಾಸಿನ ಅನುಕೂಲಗಳು ದೊರೆಯಬಹುದು.

ವೃಶ್ಚಿಕ : ನಿಮ್ಮ ದಿನ ನಿಮಗೆ ಕಿರಿಕಿರಿ ಮತ್ತು ಆಕ್ರಮಣಶೀಲತೆ ತರಬಹುದು, ಅದು ನಿಮ್ಮ ಅದೃಷ್ಟವನ್ನೂ ದೂರ ಮಾಡಬಹುದು. ನಿಮಗೆ ತೊಂದರೆ ಉಂಟು ಮಾಡುವ ಯಾವುದೇ ವಿವಾದಗಳಿಂದ ದೂರವಿರುವುದು ಉತ್ತಮ. ಆದರೆ ಸಂಜೆಯ ವೇಳೆಗೆ, ನಿಮ್ಮ ಅದೃಷ್ಟ ಬದಲಾಗುತ್ತದೆ ಮತ್ತು ನೀವು ಶಾಂತಿ ಮತ್ತು ನಿರಾಳತೆಯನ್ನು ಎದುರು ನೋಡಬಹುದು.

ಧನು : ನಿಮಗೆ ಅತ್ಯಂತ ಆಸಕ್ತಿಯುಳ್ಳ ಒಂದನ್ನು ಅನುಸರಿಸುತ್ತಿರುವುದರಿಂದ ನಿಮ್ಮ ದಿನ ಸಂಪೂರ್ಣ ಉತ್ಸಾಹ ಮತ್ತು ಭರವಸೆಯಿಂದ ಕೂಡಿರುತ್ತದೆ. ನೀವು ಯಾವುದೇ ಕಾರ್ಯಕ್ರಮದ ಕೇಂದ್ರಬಿಂದುವಾದರೆ ಆಶ್ಚರ್ಯಪಡಬೇಡಿ. ಅದಲ್ಲದೆ, ನಿಮ್ಮ ವ್ಯಾಪಾರಕ್ಕಾಗಿ ನೀವು ದೂರದ ಪ್ರಯಾಣಗಳನ್ನು ಮಾಡುವುದನ್ನು ನಿಮ್ಮ ತಾರೆಗಳು ಸೂಚಿಸುತ್ತಿರುವುದರಿಂದ ನೀವು ಬ್ಯಾಗ್ ಗಳನ್ನು ಸಜ್ಜುಗೊಳಿಸಲು ಪ್ರಾರಂಭಿಸಲು ಬಯಸಬಹುದು.

ಮಕರ : ನೀವು ಬಂಧುಮಿತ್ರರೊಂದಿಗೆ ಸಾಕಷ್ಟು ಆನಂದವನ್ನು ತ್ಯಾಗ ಮಾಡಿದ್ದೀರಿ, ಬೆನ್ನುಮೂಳೆ ಮುರಿಯುವಂತಹ ಕೆಲಸ ಮಾಡಿದ್ದೀರಿ ಮತ್ತು ನೀವು ಈಗ ಎಲ್ಲಿದ್ದೀರೋ ಅಲ್ಲಿಗೆ ತಲುಪಲು ನಿಮ್ಮ ಗಮನ ಕೇಂದ್ರೀಕರಿಸಿದ್ದೀರಿ. ನೀವು ಸಾಕಷ್ಟು ಕಠಿಣ ಪರಿಶ್ರಮ ಪಟ್ಟಿದ್ದೀರಿ. ಈಗ, ಈ ಹೆಮ್ಮರ ಫಲಗಳನ್ನು ಬಿಡುವ ಸಮಯವಾಗಿದೆ.

ಕುಂಭ : ನೀವು ಅತ್ಯಂತ ಸಂಕೀರ್ಣ ಸಮಸ್ಯೆಗಳನ್ನು ಅನಂತ ಸುಲಭವಾಗಿ ಪರಿಹರಿಸುತ್ತೀರಿ! ಆದಾಗ್ಯೂ ಜನರು ನಿಮ್ಮ ಮೇಲೆ ಹೊಣೆಗಾರಿಕೆಯನ್ನು ಎತ್ತಿ ಹಾಕುತ್ತಿದ್ದಾರೆ. ಇತರರ ತಪ್ಪುಗಳಿಗೆ ಹೊಣೆಯಾಗುವ ಇದು ನಿಮಗೆ ಕಿರಿಕಿರಿ ಉಂಟು ಮಾಡುತ್ತದೆ. ಆದರೂ ದೌರ್ಬಲ್ಯವನ್ನು ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳುವ ಅವಕಾಶವಿದೆ.

ಮೀನ : ನೀವು ವಿಶ್ವಾಸದ ಕೊರತೆ ಮತ್ತು ಗೊಂದಲದ ಭಾವನೆ ಹೊಂದಿದ್ದು ಅದು ನಿಮ್ಮ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಪ್ರತಿಫಲಿಸುತ್ತದೆ. ಇದು ಸುಲಭ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ನಿಮಗ ತೊಂದರೆಯನ್ನೂ ಉಂಟು ಮಾಡಬಹುದು. ನಿಮ್ಮ ದೈನಂದಿನ ಕಾರ್ಯ ಚಟುವಟಿಕೆಯಲ್ಲಿ ಮುನ್ನಡೆಯಿರಿ. ಯಾವುದೇ ಬಗೆಯ ವಿವಾದದಲ್ಲಿ ಸಿಲುಕಿಕೊಳ್ಳುವುದು ಅಥವಾ ದೊಡ್ಡ ಯೋಜನೆಗಳನ್ನು ರೂಪಿಸುವುದನ್ನು ತಪ್ಪಿಸಿರಿ.


Spread the love

About Laxminews 24x7

Check Also

1200 ರೈತರ ಆತ್ಮಹತ್ಯೆ: ಕಾಂಗ್ರೆಸ್ ಆಡಳಿತದಲ್ಲಿ ರೈತರ ಜೀವಕ್ಕಿಲ್ಲ ಬೆಲೆ- ಪ್ರಹ್ಲಾದ್ ಜೋಶಿ

Spread the love ಬೆಂಗಳೂರು ಜುಲೈ 26: ರಾಜ್ಯದಲ್ಲಿ ಕಳೆದ 15 ತಿಂಗಳಲ್ಲಿ 1200ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ