ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಮುಂದಿನ ಸಿಎಂ ಆಗುವ ಸರಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು ನನಗೆ ಯತ್ನಾಳ ಮೇಲೆ ಭಾರಿ ಪ್ರೀತಿ ಇದೆ ಎನ್ನೋ ಮೂಲಕ ಯತ್ನಾಳ ಬಗ್ಗೆ ಸಿಎಂ ಇಬ್ರಾಹಿಂ ಭವಿಷ್ಯ ನುಡಿದಿದ್ದಾರೆ. ಹಿಂದೂ ಬಿಟ್ಟು ಬಸವತತ್ವವನ್ನು ಶಾಸಕ ಯತ್ನಾಳ ಪಾಲನೆ ಮಾಡಬೇಕು, ಅಂದಾಗ ಮಾತ್ರ ಶಾಸಕ ಯತ್ನಾಳ ಮುಂದಿನ ಸಿಎಂ ಆಗುವ ಸರಕು ನೀವು ಎಂದು ಇಬ್ರಾಹಿಂ ಹೇಳಿದರು.
ಹತ್ತು ವರ್ಷದ ಹಿಂದೇನೆ ಹೇಳಿದ್ದೇನೆ ಶಾಸಕ ಯತ್ನಾಳ ಅವರಿಗೆ, ಅದಕ್ಕಾಗಿ ಚಿಲ್ಲರೆ ಆಗೋಕೆ ಹೋಗ್ಬೇಡಿ ಎಂದಿದ್ದೇನೆ, ಬಸವಣ್ಣನವರ ಜನ್ಮ ಭೂಮಿಯಲ್ಲಿ ಶಾಸಕ ಯತ್ನಾಳ ಜನ್ಮ ಆಗಿದೆ, ಅದಕ್ಕಾಗಿ ಬಸವಣ್ಣನವರ ತತ್ವ ಪಾಲನೆ ಮಾಡಿ ಎಂದು ಇಬ್ರಾಹಿಂ ಸಲಹೆ ನೀಡಿದರು. ಅಂದು ಪ್ರೀತಿ ಇತ್ತು.
. ಇಂದು ಯತ್ನಾಳ ಮೇಲೆ ಪ್ರೀತಿ ಇದೆ, ಬಸವತತ್ವ ಎತ್ತು ಹಿಡಿರಿ ಅದರಲ್ಲಿ ಶಕ್ತಿ ಇದೆ ಎಂದು ಹೇಳಿದರು