Home / ರಾಜಕೀಯ / ಪ್ರಕಾಶ ಹುಕ್ಕೇರಿ A.C.P. ಗೆ ನಿನ್ನ ಬಾಯಲ್ಲಿ ಇರೋ ಹಲ್ಲು ಮುರಿಯುತ್ತೇವೆ ಎಂದು ಅವಾಜ್

ಪ್ರಕಾಶ ಹುಕ್ಕೇರಿ A.C.P. ಗೆ ನಿನ್ನ ಬಾಯಲ್ಲಿ ಇರೋ ಹಲ್ಲು ಮುರಿಯುತ್ತೇವೆ ಎಂದು ಅವಾಜ್

Spread the love

ಗೆದ್ದ ಹುಮ್ಮಸ್ಸಿನಲ್ಲಿ ಪೆÇಲೀಸರಿಗೆ ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಅವಾಜ್ ಹಾಕಿರುವ ಘಟನೆ ನಡೆದಿದೆ. ಕಾನೂನು ಪಾಲಿಸಲು ಮುಂದಾದ ಎಸಿಪಿಗೆ ಏ ನಿನ್ನ ಬಾಯಲ್ಲಿ ಇರೋ ಹಲ್ಲು ಮುರಿಯುತ್ತೇವೆ ಎಂದು ಅವಾಜ್ ಹಾಕುವ ಮೂಲಕ ಪ್ರಕಾಶ ಹುಕ್ಕೇರಿ ಉದ್ಧಟತನ ಮೆರೆದಿದ್ದಾರೆ.

ವಾಯುವ್ಯ ಶಿಕ್ಷಕರ ಕ್ಷೇತ್ರದ ವಿಜೇತ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಮಾರ್ಕೆಟ್ ಎಸಿಪಿ ಸದಾಶಿವ ಕಟ್ಟಿಮನಿಗೆ ಅವಾಜ್ ಹಾಕಿದ್ದಾರೆ. ಪ್ರಮಾಣ ಪತ್ರ ಸ್ವೀಕಾರ ಮಾಡಲು ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಎಬಿ ಪಾಟೀಲ್ ಜತೆಗೆ ಪ್ರಕಾಶ ಹುಕ್ಕೇರಿ ಆಗಮಿಸಿದ್ದರು. ಎಲ್ಲರನ್ನೂ ಒಳಗೆ ಬಿಡಲ್ಲ ಎಂದು ಪೆÇಲೀಸರು ತಡೆದರು. ಈ ವೇಳೆ ಪೆÇಲೀಸರಿಗೆ ಅವಾಜ್ ಹಾಕಿ ಮತ ಎಣಿಕೆ ಕೇಂದ್ರ ಪ್ರವೇಶ ಮಾಡಿದ ಕಾಂಗ್ರೆಸ್ ನಾಯಕರು. ಮೊದಲು ಲಕ್ಷ್ಮೀ ಹೆಬ್ಬಾಳ್ಕರ್ ಜತಗೆ ಪೆÇಲೀಸರ ವಾಗ್ವಾದ ಆರಂಭವಾಗಿತ್ತು. ಬಳಿಕ ಮಧ್ಯಪ್ರವೇಶ ಮಾಡಿದ ಪ್ರಕಾಶ ಹುಕ್ಕೇರಿ ಬಾಯಲ್ಲಿ ಇರೋ ಹಲ್ಲು ಮುರಿಯುತ್ತೇವೆ ಎಂದು ಅವಾಜ್ ಹಾಕುವ ಮೂಲಕ ತಮ್ಮ ದರ್ಪ ಮೆರೆದಿದ್ದಾರೆ.

 


Spread the love

About Laxminews 24x7

Check Also

ಬಂಧನ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ದ್ವಿತೀಯು ಪಿಯು ಪಾಸಾದವರೂ ಅಪ್ಲೈ ಮಾಡಿ

Spread the love ಬೆಂಗಳೂರು: ಬ್ಯಾಂಕ್‌ ಉದ್ಯೋಗಕ್ಕಾಗಿ(Bank Job) ಹುಡುಕಾಟ ನಡೆಸುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಗೋಲ್ಡನ್‌ ಚಾನ್ಸ್‌. ಭಾರತದ ಪ್ರಮುಖ ಖಾಸಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ