Breaking News
Home / ಜಿಲ್ಲೆ / ಮ್ಯಾಂಡೋಲಿನ್ ಶ್ರೀನಿವಾಸ್ ಅವರಿಗೆ ಮಾಲೆ ಹಾಕಿದ ಸಂದರ್ಭ ನೆನೆದ ಅಪ್ಪು…………

ಮ್ಯಾಂಡೋಲಿನ್ ಶ್ರೀನಿವಾಸ್ ಅವರಿಗೆ ಮಾಲೆ ಹಾಕಿದ ಸಂದರ್ಭ ನೆನೆದ ಅಪ್ಪು…………

Spread the love

ಬೆಂಗಳೂರು: ಪುನೀತ್ ರಾಜ್‍ಕುಮಾರ್ ಅವರು ಮತ್ತೆ ತಂದೆಯನ್ನು ನೆನೆದಿದ್ದು, ಅಪರೂಪದ ನೆನಪನ್ನು ಹಂಚಿಕೊಂಡಿದ್ದಾರೆ. ಅಣ್ಣಾವ್ರ ಜನ್ಮದಿನ ಕಳೆದು ನಾಲ್ಕೈದು ದಿನಗಳಾದರೂ ಅಪ್ಪು ಮಾತ್ರ ಇನ್ನೂ ಅದೇ ಗುಂಗಿನಲ್ಲಿದ್ದು, ಅಣ್ಣ ಶಿವರಾಜ್‍ಕುಮಾರ್ ವಿವಾಹದ ಸಂದರ್ಭದಲ್ಲಾದ ಅಪರೂಪದ ಘಟನೆಯೊಂದನ್ನು ನೆನಪಸಿಕೊಂಡಿದ್ದಾರೆ.

ತಮ್ಮ ತಂದೆಯ ಜನ್ಮ ದಿನದ ನಿಮಿತ್ತ ‘ಯಾರು ಏನು ಮಾಡುವರೂ’ ಎಂದು ಹಾಡುವ ಮೂಲಕ ಗೀತ ನಮನ ಸಲ್ಲಿಸಿದ್ದರು. ಇದೀಗ ಕೆಲವು ಫೋಟೋಗಳ ವಿಡಿಯೋ ಹಾಕಿ ಹಿಂದಿನ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಲಾಕ್‍ಡೌನ್ ನಡುವೆಯೂ ಪುನೀತ್ ತಂದೆಯ ಜನ್ಮದಿನಾಚರಣೆಯನ್ನು ವಿಶೇಷವಾಗಿ ಆಚರಣೆ ಮಾಡಿದ್ದರು. ಮನೆಯಲ್ಲೇ ಕುಳಿತು ರಾಜ್‍ಕುಮಾರ್ ಅಭಿನಯದ ಕ್ರಾಂತಿವೀರ ಸಿನಿಮಾದ ‘ಯಾರೂ ಏನೂ ಮಾಡುವರೂ, ನನಗೇನು ಕೇಡು ಮಾಡುವರೂ’ ಮತ್ತು ‘ರಾಜ ನನ್ನ ರಾಜ’ ಸಿನಿಮಾದ ‘ನಿನದೇ ನೆನಪು’ ಎಂಬ ಹಾಡಗಳನ್ನು ಹಾಡಿ ಅವರನ್ನೇ ನೆನದಿದ್ದರು.

ಲಾಕ್‍ಡೌನ್ ಹಿನ್ನೆಲೆ ರಾಜ್‍ಕುಮಾರ್ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿಲ್ಲ. ಕುಟುಂಬಸ್ಥರು ಸರಳವಾಗಿ ಪೂಜೆ ಮಾಡಿ ಕಾರ್ಯ ಮಾಡಿದ್ದರು. ಅಲ್ಲದೆ ಕನ್ನಡ ಕಣ್ಮಣಿ ರಾಜ್‍ಕುಮಾರ್ ಅವರ ಹುಟ್ಟುಹಬ್ಬಕ್ಕೆ ಚಂದನವದ ಬಹುತೇಕ ತಾರೆಯರು ಶುಭ ಕೋರಿದ್ದರು. ಅದ್ಧೂರಿಯಾಗಿ ಆಚರಿಸದಿದ್ದರೂ ಎಲ್ಲರೂ ಅವರನ್ನು ನೆನದಿದ್ದರಿಂದ ಒಂದು ರೀತಿಯ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು.

ಇದೀಗ ಪುನೀತ್ ಮತ್ತೆ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಮೂಲಕ ಭಾವುಕರಾಗಿದ್ದಾರೆ. ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಎರಡು ಫೋಟೋಗಳ ಚಿಕ್ಕ ವಿಡಿಯೋವನ್ನು ಅಪ್ಪು ಹಂಚಿಕೊಂಡಿದ್ದು, ಇದರಲ್ಲಿ ತಾವೇ ಮಾತನಾಡಿದ್ದಾರೆ. ಶಿವಣ್ಣ ಅವರ ಮದುವೆಯಲ್ಲಿ ಮ್ಯಾಂಡೋಲಿನ್ ಶ್ರೀನಿವಾಸ್ ಅವರಿಗೆ ನನ್ನ ಕಡೆಯಿಂದ ಹಾರ ಹಾಕಿಸಿ, ಸನ್ಮಾನ ಮಾಡಿಸಿದ್ದರು. ಅವರು ನಮ್ಮ ತಂದೆಯ ನೆಚ್ಚಿನ ಸಂಗೀತಗಾರರಾಗಿದ್ದರು. ಶ್ರೀನಿವಾಸ್ ಅವರನ್ನು ತುಂಬಾ ಇಷ್ಟ ಪಡುತ್ತಿದ್ದರು. ಶಿವಣ್ಣ, ರಾಘಣ್ಣ ಹಾಗೂ ನನ್ನ ಮದುವೆಯಲ್ಲಿ ಸಹ ಅವರೇ ಬಂದು ಕಾರ್ಯಕ್ರಮ ಕೊಟ್ಟಿದ್ದರು ಎಂದು ಸ್ಮರಿಸಿದ್ದಾರೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ