ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ಹುಟ್ಟುಹಬ್ಬದ ವೇಳೆ ಕೇಕ್ ಹಚ್ಚಿದ ವಿಚಾರಕ್ಕೆ ನಡೆದ ಜಗಳ ಮೂವರು ಸ್ನೇಹಿತರ ಕೊಲೆಯಲ್ಲಿ ಅಂತ್ಯವಾಗಿದೆ.
ಅಮರ್ದೀಪ್ ಸೈನಿ, ಮನೀಶ್ ಸೈನಿ ಹಾಗೂ ಆಕಾಶ್ ಸೈನಿ ಮೃತಪಟ್ಟಿದ್ದು, ಪ್ರಮುಖ ಆರೋಪಿ ಜೀತು ಸೈನಿ ಪರಾರಿಯಾಗಿದ್ದಾನೆ. ಮುಖಕ್ಕೆ ಕೇಕ್ ಹಚ್ಚಿದ್ದರಿಂದ ಕೋಪಗೊಂಡ ಜೀತು ಹಾಗೂ ಇತರರು ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿ ಈ ದುರಂತ ಎಸಗಿದ್ದಾರೆ. ಗಂಭೀರ ಗಾಯಗೊಂಡಿದ್ದ ಮೂವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ದೃಢಪಡಿಸಿದ್ದಾರೆ.
Laxmi News 24×7