ಈ ಹಿನ್ನೆಲೆ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಪ್ರಕ್ರಿಯೆ ಶುರುವಾಗಿದ್ದು, ಸಾರ್ವತ್ರಿಕ ಚುನಾವಣೆ ಸಂಬಂಧ 40 ಡಿವೈಎಸ್ಪಿಗಳ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ಹಾಗೂ ರಾಜ್ಯದ ಹಲವೆಡೆ ಕರ್ತವ್ಯ ನಿರ್ವಹಿಸುತ್ತಿದ್ದ ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ವರ್ಗಾವಣೆ ಆದ ಡಿವೈಎಸ್ಪಿಗಳ ವಿವರ ಈ ಕೆಳಗಿನಂತಿದೆ.
- ಜೆಸಿ ನಗರ ಎಸಿಪಿ ಮನೋಜ್ ಕುಮಾರ್ ಡಿಜಿಪಿ ಕಚೇರಿಗೆ ವರ್ಗಾವಣೆ.
- ಸುಬ್ರಹ್ಮಣ್ಯಪುರ ಎಸಿಪಿ ಪವನ್ ಸಿಐಡಿಗೆ ವರ್ಗಾವಣೆ.
- ಕವಿತಾ ಎಸಿಪಿ, ಸಿಐಡಿಗೆ ವರ್ಗಾವಣೆ.
- ಸಿಸಿಬಿ ಎಸಿಪಿ ರೀನಾ ಸುವರ್ಣ ಸಿಐಡಿಗೆ ವರ್ಗಾವಣೆ.
- ಸಿಸಿಬಿಯಲ್ಲಿ ಸ್ಯಾಂಟ್ರೋ ರವಿ ಪತ್ನಿ ವಿರುದ್ಧದ ಸುಳ್ಳು ದರೋಡೆ ಪ್ರಕರಣದ ತನಿಖೆ ನಡೆಸಿದ್ದ ಹೆಚ್ ಎಸ್ ಧರ್ಮೇಂದ್ರ, ಎಸಿಪಿ ಮಂಗಳೂರು ಐಜಿಪಿ ಕಚೇರಿಗೆ ವರ್ಗಾವಣೆ.
- ಎಲೆಕ್ಟ್ರಾನಿಕ್ ಸಿಟಿ ಎಸಿಪಿಯಾಗಿ ರವಿಶಂಕರ್ ವರ್ಗಾವಣೆ.
ಅದೇ ರೀತಿಯಾಗಿ 13 ಐಪಿಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ ಹೀಗಿದೆ.
- ಕಾರ್ತಿಕ್ ರೆಡ್ಡಿ- ರಾಮನಗರ ಪೊಲೀಸ್ ವರಿಷ್ಠಾಧಿಕಾರಿ
- ವಿನಾಯಕ್ ಪಾಟೀಲ್-ಎಐಜಿಪಿ, ಬೆಂಗಳೂರು
- ಸಂತೋಷ್ ಬಾಬು-ಎಸ್ಪಿ, ಗುಪ್ತಚರ ಇಲಾಖೆ
- ದೇವರಾಜ್-ಡಿಸಿಪಿ, ಬೆಂಗಳೂರು ಉತ್ತರ ವಿಭಾಗದ ಡಿಸಿಪಿ
- ಸಿರಿಗೌರಿ -ಎಸ್ಪಿ, ಇಂಟರ್ನಲ್ ಸೆಕ್ಯೂರಿಟಿ ಡಿವಿಷನ್
- ಟಿ.ಪಿ.ಶಿವಕುಮಾರ್ – ಎಸ್ಪಿ, ಕೆಪಿಟಿಸಿಎಲ್
- ಹೆಚ್.ಶೇಖರ್ – ಡಿಸಿಪಿ, ಕಾನೂನು ಸುವ್ಯವಸ್ಥೆ, ಬೆಳಗಾವಿ ನಗರ
- ಪದ್ಮಿನಿ ಸಾಹೋ – ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ
- ಪ್ರದೀಪ್ ಗುಂಟಿ -ಎಸ್ಪಿ, ಕಾರಾಗೃಹ ಇಲಾಖೆ
- ಎಂ.ಎಸ್.ಗೀತಾ – ಎಸ್ಪಿ, ಪೊಲೀಸ್ ತರಬೇತಿ ಶಾಲೆ, ಮೈಸೂರು
- ರಾಮರಾಜನ್- ಪೊಲೀಸ್ ವರಿಷ್ಠಾಧಿಕಾರಿ, ಕೊಡಗು
- ರವೀಂದ್ರ ಕಾಶಿನಾಥ್ – ಡಿಸಿಪಿ, ಕಮಾಂಡ್ ಸೆಂಟರ್, ಬೆಂಗಳೂರು
- ಎಂ.ಎ.ಅಯ್ಯಪ್ಪ – ಎಸ್ಪಿ, ಗುಪ್ತಚರ ಇಲಾಖೆ