Breaking News
Home / ಹುಬ್ಬಳ್ಳಿ / ನಾಳೆ ವಿಜಯಾನಂದ ಸಿನಿಮಾ ಬಿಡುಗಡೆ

ನಾಳೆ ವಿಜಯಾನಂದ ಸಿನಿಮಾ ಬಿಡುಗಡೆ

Spread the love

ಹುಬ್ಬಳ್ಳಿ: ವಿಆರ್​​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್​ ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ ‘ವಿಜಯಾನಂದ’ ಸಿನಿಮಾ ನಾಳೆ (ಡಿ. 9) ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ಈ ಹಿನ್ನೆಲೆ ಮುನ್ನಾ ದಿನವಾದ ಗುರುವಾರ ಹುಬ್ಬಳ್ಳಿಯಲ್ಲಿ ಅಭಿಮಾನಿಗಳು ಬೈಕ್ ರ‍್ಯಾಲಿ ನಡೆಸಿದರು.

 

ಬೈಕ್​ ರ್ಯಾಲಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಸಹೋದರ ಗೋವಿಂದ ಜೋಶಿ ಚಾಲನೆ ನೀಡಿದರು. ಕನ್ನಡ ಧ್ವಜ ಹಿಡಿದು ರ‍್ಯಾಲಿಗೆ ಚಾಲನೆ ನೀಡುತ್ತಿದ್ದಂತೆ ವಿಜಯಾನಂದ ಸಿನಿಮಾದ ಪೋಸ್ಟರ್​ ಹಿಡಿದು ಅಭಿಮಾನಿಗಳು ಬೈಕ್​ ಏರಿದರು. ಚಿತ್ರದ ಯಶಸ್ಸಿಗೆ ಹಾರೈಸಿ ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಹೊರಟ ಬೈಕ್ ರ‍್ಯಾಲಿಗೆ ಡೊಳ್ಳುಕುಣಿತ ಕಲಾವಿದರು ಸಾಥ್​ ನೀಡಿದರು.

ಡೊಳ್ಳು ವಾದ್ಯಕ್ಕೆ ಮನಸೋತ ಹು-ಧಾ ಪಾಲಿಕೆಯ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಮತ್ತು ಡಾ.ವಿಜಯ ಸಂಕೇಶ್ವರ ಅವರ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಡಾ.ರಾಜ್​ಕುಮಾರ್​ ಅಭಿಮಾನಿಗಳ ಒಕ್ಕೂಟ ಹಾಗೂ ಪ್ರಲ್ಹಾದ ಜೋಶಿ ಅಭಿಮಾನಿಗಳ ಸಂಘದ ಸದಸ್ಯರೂ ಪಾಲ್ಗೊಂಡಿದ್ದರು.

ಹಾರೈಸಿ ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಹೊರಟ ಬೈಕ್​ ರ‍್ಯಾಲಿಯು ಕೇಶ್ವಾಪುರ, ಸರ್ವೋದಯ ಸರ್ಕಲ್, ಸ್ಟೇಷನ್ ರೋಡ್, ಕೋಯಿನ್ ರೋಡ್, ಕೊಪ್ಪಿಕರ ರೋಡ್, ಲ್ಯಾಮಿಂಗ್ಟನ್ ರಸ್ತೆ, ಹೊಸೂರ, ವಿದ್ಯಾನಗರ ಮಾರ್ಗವಾಗಿ ಬಿವಿಬಿ ಕಾಲೇಜು ತಲುಪಿತು.


Spread the love

About Laxminews 24x7

Check Also

ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ – ಧಾರವಾಡ ಅರ್ಧ ದಿನ ಬಂದ್!

Spread the loveಧಾರವಾಡ: ಇಡೀ ದೇಶದ ಗಮನ ಸೆಳೆದಿರುವ ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಖಂಡಿಸಿ ಇಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ