Breaking News

ನಾಯಿಗೆ ಊಟ ತಡವಾಗಿ ಹಾಕಿದ್ದಕ್ಕೆ 21 ವರ್ಷದ ಯುವಕನನ್ನು ಬೆಲ್ಟ್‌ನಿಂದ ಹೊಡೆದು ಕೊಂದ

Spread the love

 ಕ್ಷುಲಕ ಕಾರಣಕ್ಕೆ ಯುವಕನೋರ್ವ ಜೊತೆಯಲ್ಲಿದ್ದ ಸಹೋದರ ಸಂಬಂಧಿ ಯುವಕನನ್ನು ಭೀಕರವಾಗಿ ಹಿಂಸಿಸಿ ಕೊಲೆಗೈದ ಘಟನೆ ಪಾಲಕ್ಕಾಡ್‌ನ ಮನ್ನೆಂಗೋಡ್‌ ನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಹರ್ಷದ್‌ (27) ಸಾವಿಗೀಡಾದ ಯುವಕ.

ಹಕೀಂ (27) ಕೃತ್ಯವೆಸಗಿದ ಆರೋಪಿ.

ಘಟನೆ ಹಿನ್ನೆಲೆ: ಹರ್ಷದ್ ಹಾಗೂ ಹಕೀಂ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇಬ್ಬರು ಖಾಸಗಿ ಮೊಬೈಲ್‌ ಟೆಲಿಕಾಂ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಹಕೀಂ ಹರ್ಷದ್‌ ರನ್ನು ಯಾವಾಗಲೂ ಸೇವಕನಂತೆ ನೋಡಿಕೊಳ್ಳುತ್ತಿದ್ದ. ಸಂಬಂಧಿಯಾದ ಕಾರಣ ಹರ್ಷದ್‌ ಸುಮ್ಮನಿದ್ದು ಮಾತು ಕೇಳಿಕೊಂಡು ಇರುತ್ತಿದ್ದ. ಗುರುವಾರ ( ನವೆಂಬರ್‌ 3 ರಂದು) ಹಕೀಂ ತನ್ನ ಮನೆಯ ಸಾಕು ನಾಯಿಗೆ ಹರ್ಷದ್‌ ತಡವಾಗಿ ಊಟ ಹಾಕಿದ್ದಕ್ಕೆ ಸಿಟ್ಟಾಗಿ, ನಾಯಿಗೆ ಹಾಕಿದ್ದ ಬೆಲ್ಟ್‌ ಹಾಗೂ ಮರದ ವಸ್ತುವಿನಿಂದ ಹೊಡೆಯಲು ಆರಂಭಿಸಿದ್ದಾನೆ. ನೋವಿನಲ್ಲಿ ನರಳುತ್ತಿದ್ದರು ಹೊಡೆಯುತ್ತಲೇ ಹಕೀಂ ಹರ್ಷದ್‌ ರನ್ನು ಒದ್ದು ಮನೆಯಿಂದ ಕೆಳಕ್ಕೆ ದೂಡಿದ್ದಾನೆ.

ತೀವ್ರವಾಗಿ ಗಾಯಗೊಂಡ ಹರ್ಷದ್‌ ರನ್ನು ಸ್ವತಃ ಹಕೀಂ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ವೈದ್ಯರ ಬಳಿ ಈತ ಮನೆಯ ಮೇಲಿಂದ ಬಿದ್ದಿದ್ದಾನೆ ಎಂದು ಹೇಳಿದ್ದಾನೆ. ಆದರೆ ವೈದ್ಯರು ಹರ್ಷದ್‌ ಅವರ ಬೆನ್ನ ಹಿಂದಿನ ಗಾಯ ನೋಡಿ ಅನುಮಾನಗೊಂಡು ಪೊಲೀಸರಿಗೆ ತಿಳಿಸಿದ್ದಾರೆ.

ಶನಿವಾರ (ನ.5) ಪೊಲೀಸರು ಹಕೀಂರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಹಕೀಂ ಸತ್ಯ ಬಾಯಿ ಬಿಟ್ಟಿದ್ದಾನೆ.

ಹರ್ಷದ್‌ ನಿಗೆ ಬೆಲ್ಟ್‌ ಹಾಗೂ ಮರದ ವಸ್ತುವಿನಿಂದ ಹೊಡೆದ ಪರಿಣಾಮ ಆತನಿಗೆ 160 ಕ್ಕೂ ಹೆಚ್ಚು ಗಾಯಗಳಾಗಿತ್ತು. ಆಸ್ಪತ್ರೆಗೆ ಕರೆದುಕೊಂಡು ಬರುವಾಗಲೇ ಆತ ತೀವ್ರ ಗಾಯಗೊಂಡು ಸಾವನ್ನಪ್ಪಿದ್ದ ಎಂದು ವರದಿ ತಿಳಿಸಿದೆ.


Spread the love

About Laxminews 24x7

Check Also

ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆ ನಿಮ್ಮ ನಂಬಿಕೆ ಉಳಿಸಿಕೊಂಡು, ತಾಲ್ಲೂಕಿನ ರೈತರು ಮತ್ತು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ

Spread the loveಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (BDCC) ಬ್ಯಾಂಕ್‌ನ ನಿರ್ದೇಶಕರ ಸ್ಥಾನಕ್ಕೆ ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ