Home / ರಾಜಕೀಯ / “ನಾನು ಮುಖ್ಯಮಂತ್ರಿ ಆದ್ರೆ ಒಬ್ರನ್ನ ಜೈಲಿಗೆ ಕಳಸ್ತೇನೆ” :ಯತ್ನಾಳ್!

“ನಾನು ಮುಖ್ಯಮಂತ್ರಿ ಆದ್ರೆ ಒಬ್ರನ್ನ ಜೈಲಿಗೆ ಕಳಸ್ತೇನೆ” :ಯತ್ನಾಳ್!

Spread the love

ದಗ: ನಿನ್ನೆ ಗದಗದಲ್ಲಿ (Gadag) ನಡೆದ ಹಿಂದೂ ಮಹಾ ಗಣಪತಿ ಧರ್ಮ ಸಭೆಯಲ್ಲಿ‌ (Hindu Mahaganapati Dharma Sabhe) ಭಾಗವಹಿಸಿ ಮಾತ್ನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal), ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಕಾರ್ಯ ವೈಖರಿ ಬಗ್ಗೆ ಟೀಕಿಸಿದ್ರು.
ಅಲ್ದೆ, ನಾನು ಸಿಎಂ ಆದ್ರೆ ಬದಲಾವಣೆ ಆಗುತ್ತೆ ಅನ್ನೋ ಮೂಲಕ ಸಿಎಂ ಆಗುವ ಆಸೆಯನ್ನ ಮತ್ತೊಮ್ಮೆ ಬಹಿರಂಗ ಪಡೆಸಿದ್ರು.‌ ನಾನು ಮುಖ್ಯಮಂತ್ರಿ ಆಗಿದ್ರೆ.. ಮೊದಲು ಹೊಡಿರಿ ಅಂತಿದ್ದೆ, ಹೊಡದವರಿಗೆ ಪ್ರಮೋಷನ್ ಕೊಡ್ತಿದ್ದೆ, ಉತ್ತರ ಪ್ರದೇಶ ಮಾದರಿಯಲ್ಲಿ (Uttar Pradesh Model) ಬುಲ್ಡೊಜರ್ (Bulldozer) ಪ್ರಯೋಗಿಸಿ ಅಂದ್ರೆ ನಮ್ಮಲ್ಲಿ ಸಾಧ್ಯವಿಲ್ಲ ಅಂತಾರೆ.. ಸಾಧ್ಯವಿಲ್ಲ ಅಂದ್ರೆ ಯಾತಕ್ಕೆ ಇದ್ದೀರಿ.. ಮನೆಗೆ ಹೋಗ್ರಿ ಅಂತಾ ಚಾಟಿ ಬೀಸಿದ್ರು.

“ಎನ್‌ಕೌಂಟರ್ ಸ್ಪೆಷಲಿಸ್ಟ್‌ಗಳನ್ನ ಇಡ್ತಿದ್ದೆ”

ಹಾಡಹಗಲೇ ಹಿಂದೂಗಳನ್ನ ಹೊಡೀತಾರೆ.. ಹುಬ್ಬಳ್ಳಿಯಲ್ಲಿ ಪೊಲೀಸ್ ಸ್ಟೇಷನ್ ಗೆ ಬೆಂಕಿ ಹಚ್ಚಿದ್ರು.. ಪೊಲೀಸರ ಕೈಯಲ್ಲಿ ಬಂದೂಕು ಕೊಟ್ಟಿದ್ದೀರಿ.. ಆದ್ರೆ, ಹೊಡೀಬೇಡ ಅಂತಾರೆ.. ನಾನು ಮುಖ್ಯಮಂತ್ರಿ ಆಗಿದ್ರೆ.. ಮೊದಲು ಹೊಡಿರಿ ಅಂತಿದ್ದೆ, ಹೊಡದವರಿಗೆ ಪ್ರಮೋಷನ್ ಕೊಡ್ತಿದ್ದೆ, ಪಿಸಿ ಇದ್ದವನನ್ನ ಎಎಸ್‌ಐ, ಪಿಎಸ್‌ಐ ಇದ್ದವನನ್ನ ಸಿಪಿಐ ಮಾಡ್ತಿದ್ದೆ,. ಅಲ್ದೆ, ಕರ್ನಾಟಕದ ತುಂಬ ಎನ್ಕೌಂಟರ್ ಸ್ಪೆಷಲಿಸ್ಟ್ ಗಳನ್ನ ಇಡುತ್ತಿದ್ದೆ..

“ನಾನು ಮುಖ್ಯಮಂತ್ರಿ ಆದ್ರೆ ಒಬ್ರನ್ನ ಜೈಲಿಗೆ ಕಳಸ್ತೇನೆ”

ನಾನು ಮತ್ತೊಬ್ಬ ಯೋಗಿ ಬಾಬಾ ಆಗ್ತಾನೆ ಅನ್ನೋ ಭಯ ಅವರಿಗೆ ಅನ್ನೋ ಮೂಲಕ ಹೆಸರು ಪ್ರಸ್ತಾಪಿಸಿದೇ, ಸ್ವಪಕ್ಷದ ಕೆಲ ನಾಯಕರ ಬಗ್ಗೆ ಅಸಮಾಧಾನ ಹೊರ ಹಾಕಿದ್ರು. ನಾನು ಅಪ್ಪಿತಪ್ಪಿ ಮುಖ್ಯಮಂತ್ರಿ ಆದ್ರೆ ಒಬ್ರನ್ನ ಜೈಲಿಗೆ, ಒಬ್ಬರನ್ನ ಕಾಡಿಗೆ ಕಳಿಸ್ತೇನೆ ಅಂತಾ ಹೇಳಿದ್ರು.. ಮೊನ್ನೆ ಮಹಾರಾಷ್ಟ್ರದಲ್ಲಿ ಪೊಲೀಸರು ಡಿಜೆ ಎದ್ರು ಕುಣಿದಿದಾರೆ.. ಮುಂದೆ ನಾನು ಮುಖ್ಯಮಂತ್ರಿಯಾದ್ರೆ ಎಲ್ಲರೂ ಕುಣಿಯೋಣ ಅಂತಾ ಹೇಳಿ ಮುಖ್ಯಮಂತ್ರಿ ಆಗುವ ಆಸೆಯನ್ನ ಮತ್ತೊಮ್ಮೆ ಹೇಳಿಕೊಂಡ್ರು.‌


Spread the love

About Laxminews 24x7

Check Also

ಅಧಿಕಾರಿಗಳ ಭರವಸೆ: ಧರಣಿ ಅಂತ್ಯ.

Spread the love ರಾಮದುರ್ಗ: ಗ್ರಾಮ ಪಂಚಾಯ್ತಿಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಹಣವನ್ನು ಸಂಬಂಧಿಸಿದ ಅಧಿಕಾರಿಗಳಿಂದ ಸರ್ಕಾರಕ್ಕೆ ಭರಿಸುವ ಭರವಸೆಯನ್ನು ತಾಲ್ಲೂಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ