ಇಂದು ದಿನಾಂಕ 17/09/2022 ರಂದು ಜ್ಯೋತಿ ನಗರ, ಗಣೇಶಪೂರ ಬೆಳಗಾವಿ, ಇಲ್ಲಿ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ಹಾಗೂ ಸ್ಪಂದನ ಸುಪರ ಸ್ಪೆಶಾಲಿಸ್ಟ ಹಾಸ್ಪಿಟಲ್ ವತಿಯಿಂದ್ ಉಚಿತ್ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳಗಾವಿಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ. ಗೋವಿಂದ ಕಾರ್ಜೋಳ ಇವರ ಅಮೃತ ಹಸ್ತದಿಂದ ನೆರೆವೆರಿತು.
ಕಾರ್ಯಕ್ರಮದಲ್ಲಿ ಬೆಳಗಾವಿಯ ಸಂಸದರಾದ ಶ್ರೀಮತಿ. ಮಂಗಲಾ ಅಂಗಡಿ, ಬೆಳಗಾವಿ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಶ್ರೀ. ಸಂಜಯ ಪಾಟೀಲ, ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷ ಶ್ರೀ. ಧನಂಜಯ ಜಾಧವ ಸ್ಪಂದನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸುಭಾಷ್ ಪಾಟೀಲ್ ಬಿಜೆಪಿಯ ವಕ್ತಾರರು ಶ್ರೀ. ಎಮ್. ಬಿ. ಜಿರ್ಲಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.