Breaking News

ಮಹಿಳೆಯರ ಕೊರಳಲ್ಲಿನ ಆಭರಣ,, ಎಮ್ಮೆ, ಕಳ್ಳತನ ಮಾಡುತ್ತಿದ್ದ ಐನಾತಿ ಕಳ್ಳರನ್ನ ಹಾರೂಗೇರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿ

Spread the love

ಕೆಲವೊಮ್ಮೆ ಮಹಿಳೆಯರ ಕೊರಳಲ್ಲಿನ ಆಭರಣ, ಮತ್ತೆ ಕೆಲವೊಮ್ಮೆ ಎಮ್ಮೆ ಹೀಗೆ ವಿಭಿನ್ನ ರೀತಿಯಲ್ಲಿ ಕಳ್ಳತನ ಮಾಡುತ್ತಿದ್ದ ಐನಾತಿ ಕಳ್ಳರನ್ನು ಬಂಧಿಸುವಲ್ಲಿ ಹಾರೂಗೇರಿ ಪೊಲೀಸ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಾಗೂಗೇರಿ ಪೊಲೀಸರು ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಒಟ್ಟಾರೆ 4 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೆಪ್ಟೆಂಬರ್ 9 ರಂದು ಹಾರೂಗೇರಿಯ ವಡಕಿ ತೋಟದಲ್ಲಿ ಬೈಕ್ ಮೇಲೆ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಮೂವರನ್ನು ಹಾರೂಗೇರಿ ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿತರು ಹಾರೂಗೇರಿ, ಮುಗಳಖೋಡ, ತೇರದಾಳ, ಗ್ರಾಮಗಳಲ್ಲಿ ಮಹಿಳೆಯ ಮೈಮೇಲಿನ ಆಭರಣ, ಹಾಗು ಹಾರೂಗೇರಿ ಹದ್ದೆಯಲ್ಲಿ 5 ಎಮ್ಮೆಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿದುಬಂದಿದೆ.

ಈ ಪ್ರಕರಣ ಸೇರಿದಂತೆ ಇನ್ನೂ ನಾಲ್ಕು ಪ್ರಕರಣಗಳಲ್ಲಿ ಒಬ್ಬ ಬಾಲಕ ಸೇರಿದಂತೆ ಒಟ್ಟು 5 ಜನರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿತರು ಕಳ್ಳತನ ಮಾಡಿದ ಎರಡು ಎಮ್ಮೆಗಳನ್ನು ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ.

ಇನ್ನು ಕಳ್ಳತನ ಮಾಡಿದ್ದ ಬಂಗಾರ ಆಭರಣಗಳನ್ನು ರೂಮಿನಲ್ಲಿ ಬಚ್ಚಿಟ್ಟಿರುವುದಾಗಿ, ಹಾಗೂ ಮೂರು ಎಮ್ಮೆಗಳನ್ನು ತಮ್ಮ ಮನೆಯ ಮುಂದೆ ಹಾಜರು ಪಡಿಸುವಂತೆ ಒಪ್ಪಿಕೊಂಡಿರುತ್ತಾರೆ.


Spread the love

About Laxminews 24x7

Check Also

ಹಣಮಾಪುರ (ಕೌಲಗುಡ್ಡ) ನಲ್ಲಿ ಶ್ರೀ ಶಿವರಾಯ ಮುತ್ಯಾ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವ ಸತೀಶ ಜಾರಕಿಹೊಳಿ.

Spread the loveಅಥಣಿ ಸಮೀಪದ ಹಣಮಾಪುರ (ಕೌಲಗುಡ್ಡ) ನಲ್ಲಿ ಶ್ರೀ ಶಿವರಾಯ ಮುತ್ಯಾ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಪ್ರವಚನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ