Breaking News

22 ಶಾಲೆಗಳಿಗೆ ಮುಂದುವರಿದ ರಜೆ ಚಿರತೆ ಸೆರೆಗೆ ಆಪರೇಷನ್ ಗಜಪಡೆ ಮುಕ್ತಾಯ ಶೋಧಕಾರ್ಯ ಅಂತ್ಯ

Spread the love

ಬೆಳಗಾವಿಯಲ್ಲಿ ಚಿರತೆ ಸೆರೆಗೆ ಆಪರೇಷನ್ ಗಜಪಡೆ ಮುಕ್ತಾಯವಾಗಿದ್ದು. 250 ಎಕರೆ ಪ್ರದೇಶದ ಗಾಲ್ಫ ಮೈದಾನದಲ್ಲಿ ಎರಡು ಆನೆಗಳನ್ನು ಬಳಸಿ ನಡೆಸಿದ ಕೋಂಬಿಂಗ್ ಅಂತ್ಯವಾಗಿದೆ.

ಮಧ್ಯಾಹ್ನ 12.30ರಿಂದ ನಡೆದಿದ್ದ ಶೋಧ ಕಾರ್ಯಾಚರಣೆ ಮುಕ್ತಾಯವಾಗಿದ್ದು. 250 ಎಕರೆ ಪ್ರದೇಶದಲ್ಲಿ 7 ಕಿಮೀ ವ್ಯಾಪ್ತಿಯಲ್ಲಿ ಕೋಂಬಿಂಗ್ ನಡೆಸಲಾಯಿತು. ಅಲ್ಲಲ್ಲಿ ಕೆಲವೆಡೆ ಚಿರತೆ ಓಡಾಡಿದ ಕುರುಹುಗಳು ಪತ್ತೆಯಾಗಿದ್ದು. ಹಂದಿ ಬೇಟೆಯಾಡಿ ಅರ್ಧ ಮಾಂಸವನ್ನು ಚಿರತೆ ತಿಂದಿದೆ. ಕಳೆದ 5 ಗಂಟೆಗಳಿಂದ ನಿರಂತರವಾಗಿ ನಡೆದ ಶೋಧಕಾರ್ಯ ಅಂತ್ಯವಾಯ್ತು

ಆನೆಗಳ ಜೊತೆ ಅರವಳಿಕೆ ತಜ್ಞರು, ಅರಣ್ಯ, ಪೆÇಲೀಸ್ ಸಿಬ್ಬಂದಿ ತೆರಳಿದ್ದರು. ಇನ್ನು ಹುಕ್ಕೇರಿಯ ಹಂದಿ ಹಿಡಿಯುವ ತಂಡದ ಸದಸ್ಯರು ಕೂಡ ವಾಪಸ್ ಆಗಿದ್ದಾರೆ. ನಾಳೆ ಬೆಳಗ್ಗೆಯಿಂದ ಮತ್ತೆ ಎರಡು ಆನೆಗಳನ್ನು ಬಳಸಿ ಶೋಧ ಕಾರ್ಯ ಮುಂದುವರಿಯಲಿದೆ. ಚಿರತೆ ಸೆರೆಯಾಗದ ಹಿನ್ನೆಲೆ 22 ಶಾಲೆಗಳ ರಜೆ ಮುಂದುವರಿಸಲಾಗಿದ್ದು. ಗಾಲ್ಫ್ ಮೈದಾನದ 1 ಕಿಮೀ ವ್ಯಾಪ್ತಿಯ ಸರ್ಕಾರಿ, ಖಾಸಗಿ ಶಾಲೆಗಳಿಗೆ ರಜೆ ಮುಂದುವರಿದಿದೆ.


Spread the love

About Laxminews 24x7

Check Also

ಮೂರು ಮಕ್ಕಳ ತಾಯಿಯನ್ನು ಕತ್ತು ಸೀಳಿ ಕೊಂದ ಪ್ರಿಯಕರ

Spread the loveದಾವಣಗೆರೆ: ವ್ಯಕ್ತಿಯೊಬ್ಬ ಪ್ರಿಯತಮೆಯ ಕತ್ತು ಸೀಳಿ ಹತ್ಯೆಗೈದ  ಘಟನೆ ದಾವಣಗೆರೆಯ  ಶೇಖರಪ್ಪ ನಗರದಲ್ಲಿ ನಡೆದಿದೆ. ನಾಗರತ್ನ (45) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ