Breaking News

ಈ ಸರ್ಕಾರದಲ್ಲಿ ಕಮಿಷನ್​ಗೆ ಲೆಕ್ಕ ಇಲ್ಲ ಆರ್​ಎಸ್​ಎಸ್ ಪ್ರಮುಖರಿಗೆ ಕಮಿಷನ್ ಹಣ ಕೊಡಲೇಬೇಕು.:HD.K.

Spread the love

ಶಿವಮೊಗ್ಗ: ಈ ಸರ್ಕಾರದಲ್ಲಿ ಕಮಿಷನ್​ಗೆ ಲೆಕ್ಕ ಇಲ್ಲ. ಆರ್​ಎಸ್​ಎಸ್ ಪ್ರಮುಖರಿಗೆ ಶಾಸಕರು, ಸಚಿವರಿಂದ ಕಮಿಷನ್ ಹೋಗ್ತಾ ಇದೆ. ಆರ್​ಎಸ್​ಎಸ್ ನ 2-3 ಜನ ಪ್ರಮುಖರಿಗೆ ಕಮಿಷನ್ ಹಣ ಕೊಡಲೇಬೇಕು. ಶಾಸಕರು, ಸಚಿವರು ಎಲ್ಲರೂ ಪ್ರತಿ ತಿಂಗಳು ಪಕ್ಷದ ಹಿಂದಿರುವ ಮುಖಂಡರಿಗೆ ನೇರವಾಗಿ ಕಮಿಷನ್ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷ ನೇರವಾಗಿ ಆರ್​ಎಸ್​ಎಸ್​ನಿಂದ ನಡೆಯುತ್ತಿದೆ. ಇದರ ಬಗ್ಗೆ ಯಾವುದೇ ಸಂಶಯವಿಲ್ಲ. ಪ್ರತಿ ಕ್ಷೇತ್ರದಲ್ಲಿ 20 ರಿಂದ 30 ಕೋಟಿ ಖರ್ಚು ಮಾಡಲು ಹಣ ಸಂಗ್ರಹ ಆಗುತ್ತಿದೆ. ಬೆಂಗಳೂರಿನ ಶಾಸಕರು, ಸಚಿವರಿಗೆ ಎಷ್ಟು ಕಮಿಷನ್ ಕೊಟ್ಟಿದ್ದಾರೆ ಎಂದು ಕೇಳಿ ನೋಡಿ ಎಂದರು.

ರಾಷ್ಟ್ರಪತಿ ಚುನಾವಣೆ ವಿಚಾರ: ಈಗಿರುವ ಎನ್​ಡಿಎ ಅಭ್ಯರ್ಥಿ ಗೆಲ್ಲಲೂ ಯಾವುದೇ ಸಮಸ್ಯೆ ಇಲ್ಲ. ನಡ್ಡಾ ಅವರು ಸಹ ಕಾಲ್ ಮಾಡಿದ್ದಾರೆ‌. ಅಭ್ಯರ್ಥಿ ದ್ರೌಪದಿ ಮುರ್ಮು ಸಹ ಮಾತನಾಡಿದ್ದಾರೆ. ಶಾಸಕರ ಜೊತೆ ಕುಳಿತು ಚರ್ಚೆ ಮಾಡಿ, ಅಂತಿಮ‌ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಹೆಚ್​ಡಿಕೆ ಹೇಳಿದ್ರು.


Spread the love

About Laxminews 24x7

Check Also

11 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ” ಆರೋಗ್ಯಕರ ಜೀವನಕ್ಕೆ ಯೋಗಾಭ್ಯಾಸ ಸಹಕಾರಿ: ಸಂಸದ ಜಗದೀಶ್ ಶೆಟ್ಟರ

Spread the love“ಬೆಳಗಾವಿ, ಜೂ.21(ಕರ್ನಾಟಕ ವಾರ್ತೆ): ಯೋಗ ಅಭ್ಯಾಸ ಸಾವಿರಾರು ವರ್ಷಗಳಿಂದ ಪಾಲಿಸುತ್ತಿರುವ ಆರೋಗ್ಯ ಸುಧಾರಣಾ ಕ್ರಮವಾಗಿದೆ. ಯೋಗದಿಂದ ಶಾರೀರಿಕ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ