Breaking News

ಅದಾನಿ, ಅಂಬಾನಿ ನನ್ನ ದೊಡ್ಡಪ್ಪ ಚಿಕ್ಕಪ್ಪ ಅಲ್ಲ, ವಾದ್ರಾ ತಪ್ಪು ಮಾಡಿದ್ರೆ ಆತನೂ ಮಣ್ಣು ತಿನ್ನುತ್ತಾನೆ: ರಮೇಶ್ ಕುಮಾರ್

Spread the love

ಬೆಂಗಳೂರು: ಅದಾನಿ, ಅಂಬಾನಿ ನನ್ನ ದೊಡ್ಡಪ್ಪ ಚಿಕ್ಕಪ್ಪ ಅಲ್ಲ. ಉಳಿದವರು ನಮ್ಮ ಸೋದರ ಮಾವನ ಮಕ್ಕಳು ಅಲ್ಲವೆಂದು ಮಾಜಿ ಸ್ಪೀಕರ್​, ಶಾಸಕ ರಮೇಶ್ ಕುಮಾರ್ ವಾಗ್ದಾಳಿ ನಡೆಸಿದರು.

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡುತ್ತಾ, ದೇಶದ ಗಂಟು ತಿಂದವರು ಯಾರೇ ಆದರೂ ಅವರು ದೇಶದ್ರೋಹಿಗಳು. ರಾಬರ್ಟ್ ವಾದ್ರಾ ಮಾಡಿದರೆ ಆತನೂ ಮಣ್ಣು ತಿನ್ನುತ್ತಾನೆ. ನಾನೇನು ವಕಾಲತ್ತು ಹಾಕಿದ್ದೀನಾ ಎಂದು ಪ್ರಶ್ನಿಸಿದರು.

ಅದಾನಿ, ಅಂಬಾನಿ ಆಸ್ತಿ ಹೆಚ್ಚಳ ವಿಚಾರವಾಗಿ ಮಾತನಾಡುತ್ತಾ, ರಾಜ್ಯ ಅವರ ನೆಟ್​​​​ವರ್ಕ್​​​ಗಿಂತ ಕಡಿಮೆ ಇದೆ. ಸ್ವಾತಂತ್ರ್ಯ, ಕ್ರಾಂತಿ ಎಲ್ಲಿಂದ ಎಲ್ಲಿಗೆ ಹೋಯ್ತು. 2014ರಲ್ಲಿ ಅದಾನಿ ಆಸ್ತಿ 4,270 ಲಕ್ಷ ಕೋಟಿ, 2021ರಲ್ಲಿ 50 ಬಿಲಿಯನ್ ಡಾಲರ್ ಆಗಿದೆ ಎಂದರು.

ರಮೇಶ್ ಕುಮಾರ್ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಯತ್ನಾಳ್, ಸ್ವಾತಂತ್ರ್ಯ ಬಂದ ಬಳಿಕ ರಾಜ್ಯವನ್ನು ಆಳಿದವರು ಯಾರು?, ಹಳೆಯ ಅಂಬಾನಿ, ಅದಾನಿ ಹೊಸದಾಗಿ ರಾಬರ್ಟ್ ವಾದ್ರಾ ಇರಬಹುದು. ದೇಶವನ್ನು 70 ವರ್ಷ ಆಡಳಿತ ಮಾಡಿದ ಕಾಂಗ್ರೆಸ್​​​​ನವರು ಉತ್ತರ ಕೊಡಬೇಕು. ವಿಜಯ ಮಲ್ಯ, ನೀರವ್ ಮೋದಿಗೆ ಸಾಲ ಕೊಟ್ಟದ್ದು ಯಾರು?, ಕೇವಲ ಅದಾನಿ, ಅಂಬಾನಿಯ ಉದಾಹರಣೆ ಕೊಟ್ಟರೆ ಸಾಲದು. ರಾಬರ್ಟ್ ವಾದ್ರಾ ಎಷ್ಟು ಆಸ್ತಿ ಏರಿಕೆ ಆಗಿದೆ ಎಂಬ ಬಗ್ಗೆಯೂ ಹೇಳಬೇಕು ಎಂದು ಆಗ್ರಹಿಸಿದರು.


Spread the love

About Laxminews 24x7

Check Also

ಕಾರ್ಮಿಕ ಸಂಘಟನೆಗಳಿಂದ ಭಾರತ್ ಬಂದ್‌ಗೆ ಕರೆ – 9 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರೊಟೆಸ್ಟ್

Spread the loveಬೆಂಗಳೂರು: ದೇಶಾದ್ಯಂತ ಹಲವು ಕಾರ್ಮಿಕ ಸಂಘಟನೆಗಳು  ಇಂದು ಭಾರತ್ ಬಂದ್‌ಗೆ  ಕರೆ ಕೊಟ್ಟಿವೆ. ಕೇಂದ್ರ ಸರ್ಕಾರದ ಹೊಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ