Breaking News

ದಲಿತ ಮುಖ್ಯಮಂತ್ರಿ ಬಗ್ಗೆ ನಿರ್ಧಾರಿಸುವುದು ನಾನಲ್ಲ, ಹೈಕಮಾಂಡ್:B.S.Y.

Spread the love

ಬೆಳಗಾವಿ: ದಲಿತ ಮುಖ್ಯಮಂತ್ರಿ ಬಗ್ಗೆ ನಿರ್ಧಾರಿಸುವುದು ನಾನಲ್ಲ, ಹೈಕಮಾಂಡ್ ಅಂತ ಸಿಎಂ ಬಿಎಸ್‌ ಯಡಿಯ್ಯೂರಪ್ಪನವರು (BS Yeddyurappa) ಹೇಳಿದ್ದಾರೆ. ಅವರು ಇಂದು ಬೆಳಗಾವಿಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ಆಗಮಿಸಿದ್ದ ವೇಳೆಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡುತ್ತ ಈ ಬಗ್ಗೆ ಹೇಳಿದರು, ಇದೇ ವೇಳೆ ಅವರು ದೇವರ ದಯೆಯಿಂದ ಮಳೆ ಕಡಿಮೆಯಾಗಿದ್ದು, ಇದೇ ರೀತಿ ಇನ್ನೇರಡು ದಿನದಲ್ಲಿ ಮಳೆ ಪ್ರಮಾಣದಲ್ಲಿ ಕಡಿಮೆಯಾದ್ರೆ, ಎಲ್ಲವೂ ಸರಿ ಹೋಗುತ್ತದೆ ಅಂತ ಹೇಳಿದರು. ಇನ್ನೂ ಮಳೆಗೆ ಹಾನಿಗೆ ಈಡಾದ ಪ್ರದೇಶ ಜನತೆಯನ್ನು ಭೇಟಿಯಾಗಿ ಮಾತನಾಡುವೆ ಅಂತ ಹೇಳಿದ ಅವರು ಸರ್ಕಾರ ಅವರ ಪರವಾಗಿ ಎಲ್ಲ ಕೆಲಸವನ್ನುಮಾಡಲಿದೆ ಅಂತ ಹೇಳಿದರು.

ಮಳೆ ನಿಂತ ಬಳಿಕ ಮನೆ ಮನೆ ಸಮೀಕ್ಷೆ ಕೈಗೊಂಡು ನಂತರ ಸೂಕ್ತ ಪರಿಹಾರವನ್ನು ನೀಡಲಾಗುವುದು ಅಂತ ತಿಳಿಸಿದ ಸಿಎಂ ಬಿಎಸ್‌ವೈ ನೆರೆಯಿಂದ ತೊಂದರೆಗೆ ಈಡಾಗಿರುವ ಜನತೆಯ ಸಲುವಾಗಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ತಾತ್ಕಾಲಿಕವಾಗಿ ಆರಂಭಿಸಲಾಗಿರುವ ಕಾಳಜಿ ಕೇಂದ್ರಗಳಲ್ಲಿ ಊಟೋಪಹಾರ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ, ಜನತೆಯೊಂದಿಗೆ ರಾಜ್ಯ ಸರ್ಕಾರವಿದ್ದು ಯಾವುದೇ ಭಯವನ್ನು ಪಡುವ ಅಗತ್ಯವಿಲ್ಲ ಅಂಥ ಹೇಳಿದರು.


Spread the love

About Laxminews 24x7

Check Also

ಕಿರಾವಾಳೆಯ ಗೋರಕ್ಷನಾಥ ಮಠದಲ್ಲಿ ಕಳ್ಳತನ

Spread the love ಕಿರಾವಾಳೆಯ ಗೋರಕ್ಷನಾಥ ಮಠದಲ್ಲಿ ಕಳ್ಳತನ ಖಾನಾಪೂರ ತಾಲೂಕಿನ ಗುಂಜಿ ಬಳಿಯಿರುವ ಕಿರಾವಾಳೆಯ ಪ್ರಸಿದ್ಧ ಗೋರಕ್ಷನಾಥ ಮಠದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ