Breaking News

ಕೋವಿಡ್​​ ಪರಿಹಾರಕ್ಕಾಗಿ ಮಾಸ್ಟರ್​​ ಪ್ಲಾನ್​​; ಮೃತ ಮಹಿಳೆ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿದ ಆಸ್ಪತ್ರೆ ಸಿಬ್ಬಂದಿ

Spread the love

ಬಾಗಲಕೋಟೆ: ಕೊರೊನಾ​​​ ವೈರಸ್​ಗೆ ಬಲಿಯಾದ ಮೃತರಿಗೆ ಸರ್ಕಾರ ಘೋಷಿಸಿರುವ ಒಂದು ಲಕ್ಷ ರೂಪಾಯಿ ಪರಿಹಾರ ಪಡೆಯಲು ಕಿಡಿಗೇಡಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬಾಗಲಕೋಟೆಯಲ್ಲಿ ಎರಡು ತಿಂಗಳು ಹಿಂದೆ ತೀರಿಕೊಂಡಿದ್ದ ಮಹಿಳೆಗೆ ಈಗ ಆರ್​ಟಿಪಿಸಿಆರ್ ಪಾಸಿಟಿವ್ ರಿಪೋರ್ಟ್ ತಯಾರಿ ಮಾಡಿ ಈ ಪರಿಹಾರ ಪಡೆಯಲು ಯತ್ನಿಸಿರುವುದು ತಿಳಿದು ಬಂದಿದೆ.

ರಾಜ್ಯ ಸರ್ಕಾರ ಕೊತೊನಾದಿಂದ ಮೃತಪಟ್ಟವರಿಗೆ ಪರಿಹಾರ ಘೋಷಣೆ ಮಾಡಿದೆ. ಈ ಪರಿಹಾರವನ್ನು ಹೇಗಾದರೂ ಸರಿ ಪಡೆಯಲೇಬೇಕು ಎಂದು ಬಾಗಲಕೋಟೆ ಜಿಲ್ಲಾಸ್ಪತ್ರೆಯ ಸಿಬ್ಬಂದಿ 2 ತಿಂಗಳ ಹಿಂದೆ ಮೃತಪಟ್ಟ ಮಹಿಳೆಗೆ ಈಗ ಪಾಸಿಟಿವ್ ರಿಪೋರ್ಟ್​ ನೀಡಿದ್ದಾರೆ. ಹೀಗೆ ಗೋಲ್​​ ಮಾಲ್​​ ಮಾಡಿದ ಸಿಬ್ಬಂದಿ ಸ್ಕ್ಯಾನಿಂಗ್ ವಿಭಾಗದ ಸ್ಟಾಫ್​ನರ್ಸ್​ ಬಸವರಾಜ್​ ಬಿಲಕೇರಿ, ಡಾಟಾ ಎಂಟ್ರಿ ಆಪರೇಟರ್​ ಬಸನಗೌಡ ಗಿರಿಯಪ್ಪಗೌಡರನ್ನು ನವನಗರ ಪೊಲೀಸರು ಬಂಧಿಸಿದ್ದಾರೆ.

ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಶೇಖವ್ವ ರೂಗಿ (53) ಎಂಬವರು, ಮೇ. 2 ರಂದು ಮೃತಪಟ್ಟಿದ್ದರು. ಅಂದು ಆಸ್ಪತ್ರೆ ಸಿಬ್ಬಂದಿ ಶೇಖವ್ವ ರೂಗಿಗೆ ಆರ್​ಟಿಪಿಸಿಆರ್​ ಟೆಸ್ಟ್​ ಮಾಡಿಸಿರಲಿಲ್ಲ. ಆದರೀಗ ಸರ್ಕಾರ ಪರಿಹಾರ ಘೋಷಣೆ ಮಾಡಿದ್ದೇ ತಡ ಇದನ್ನು ಶೇಖವ್ವ ಹೆಸರಿನಲ್ಲಿ ತಿಂದು ಹಾಕಲು ನಕಲಿ ದಾಖಲೆ ಸೃಷ್ಟಿ ಮಾಡಲಾಗಿದೆ ಎಂದು ಹೇಳಲಾಗಿದೆ.

ಮೇ 1ರಂದು ಶೇಖವ್ವ ಅವರ ಗಂಟಲು ದ್ರವ್ಯ ಸಂಗ್ರಹಿಸಲಾಗಿತ್ತು, ಜುಲೈ 15ರಂದು ಪಾಸಿಟಿವ್ ಬಂದಿದೆ ಎಂದು ಸಿಬ್ಬಂದಿ ರಿಪೋರ್ಟ್​ನಲ್ಲಿ ನಮೂದಿಸಿದ್ದರು. 2 ತಿಂಗಳು ತಡವಾಗಿದ್ದರಿಂದ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಅಧಿಕಾರಿಗಳು ತಪಾಸಣೆ ಮಾಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ ಎಂದು ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಪ್ರಕಾಶ್ ಬಿರಾದರ್​ ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ