Breaking News

ಭೀಕರ ಅಪಘಾತಕ್ಕೆ ಬಲಿ ಮೃತರು ಹುಕ್ಕೇರಿ ತಾಲೂಕಿನ ಬೆಲ್ಲದ-ಬಾಗೇವಾಡಿ ಗ್ರಾಮದವರು

Spread the love

ಅಮಾವಾಸೆ ಪೂಜೆಗೆಂದು ತೆರಳಿದ್ದ ಯುವಕರಿಬ್ಬರು ಲಾರಿಗೆ ಹಿಂದಿನಿಂದ ಬೈಕ್ ಗುದ್ದಿಸಿದ ಪರಿಣಾಮ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಸಮೀಪದ ನಿಪ್ಪಾಣಿ -ಮುದೋಳ ರಾಜ್ಯ ಹೆದ್ದಾರಿಯಲ್ಲಿ ಕಬ್ಬೂರ ಟೋಲ್ ಗೇಟ್ ಹತ್ತಿರ ಟೋಲ್ ಹಣ ಕಟ್ಟಲು ನಿಂತಿದ್ದ ಲಾರಿಗೆ ಬೈಕ್ ಸವಾರರಿಬ್ಬರು ಹಿಂಬದಿಯಿಂದ ಗುದ್ದಿ ಅಪಘಾತವಾಗಿದೆ. ಸ್ಥಳದಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ. ಘಟನೆ ಶುಕ್ರವಾರ ರಾತ್ರಿ ೯ರ ವೇಳೆಗೆ ನಡೆದಿದೆ.
ಮೃತರು ಹುಕ್ಕೇರಿ ತಾಲೂಕಿನ ಬೆಲ್ಲದ-ಬಾಗೇವಾಡಿ ಗ್ರಾಮದ ಸಿದ್ದಾರ್ಥ ಅಶೋಕ ಖೆಮಲಾಪುರೆ(೨೬) ಮತ್ತು ಪ್ರಮೋದ ಕರಿಯಪ್ಪಾ ನಾಯಿಕ(೨೬).

ಸಿದ್ದಾರ್ಥ ಅಶೋಕ ಖೆಮಲಾಪುರೆ ಕಬ್ಬೂರ ಪಟ್ಟಣದಲ್ಲಿ ಅಗ್ರೋ ಅಂಗಡಿ ಇಟ್ಟಿದ್ದರು. ಅಮಾವಾಸೆ ನಿಮಿತ್ಯವಾಗಿ ನಿಪ್ಪಾಣಿ ಸಮೀಪದ ಸ್ತವನಿದಿಗೆ ದೇವರಿಗೆಂದು ಹೋಗಿ ವಾಪಸ್ ತಮ್ಮೂರಿಗೆ ಬರುವಾಗ ಈ ಘಟನೆ ಸಂಭವಿಸಿದೆ.
ಈ ಕುರಿತು ಚಿಕ್ಕೋಡಿ ಪೋಲಿಸ್ ಠಾಣೆಯಲ್ಲಿ ಪ್ರಖರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಸಿಪಿಐ ಆರ್.ಆರ್.ಪಾಟೀಲ ಮತ್ತು ಪಿಎಸ್‌ಐ ಅಶೋಕ ಕುಳ್ಳುರ ಮತ್ತು ಸಿಬ್ಬಂದಿತೆರಳಿದ್ದರು.


Spread the love

About Laxminews 24x7

Check Also

ಮೆಡಿಕಲ್ ಸೀಟು ಕೊಡಿಸುವುದಾಗಿ ಖಾಸಗಿ ಕಂಪನಿ ಉದ್ಯೋಗಿಗೆ ₹10 ಲಕ್ಷ ವಂಚನೆ ಆರೋಪ

Spread the loveದಾವಣಗೆರೆ: ಮೆಡಿಕಲ್ ಸೀಟು ಕೊಡಿಸುವುದಾಗಿ ನಂಬಿಸಿ ಖಾಸಗಿ ಕಂಪನಿ ಉದ್ಯೋಗಿಗೆ 10.64 ಲಕ್ಷ ರೂಪಾಯಿ ವಂಚಿಸಿರುವ ಘಟನೆ 2022ರಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ