ವಿಜಯಪುರ: ಮಾಜಿ ಶಾಸಕ ಎನ್.ಎಸ್.ಖೇಡ ಅವರು ನಿಧನರಾದರು. ಇಂಡಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದ ಅವರು ಸಮಾಜಮುಖಿ ಚಟುವಟಿಕೆಯಿಂದ ಹೆಸರುವಾಸಿಯಾಗಿದ್ದರು.
ನೀರಿನ ಗಾಂಧಿ ರಾಜೇಂದ್ರಸಿಂಗ್ ತಂಡದೊಂದಿಗೆ ಖೇಡ ಅವರು ಜಲಬಿರಾದಾರ್ ಆಗಿದ್ದರು. ಜ್ಞಾನಯೋಗಾಶ್ರಮದ ಬುದ್ಧಿಜಿ ಸಾಮಿಪ್ಯದಲ್ಲಿ ಸದಾಕಾಲ ಜನಹಿತ ಚಿಂತನೆಯಲ್ಲಿ ತೊಡಗಿದ್ದರು. ಖೇಡರ ಅಗಲಿಕೆಯಿಂದ ಮೌಲ್ಯಾಧಾರಿತ ರಾಜಕಾರಣದ ಕೊಂಡಿಯೊಂದು ಕಳಚಿದಂತಾಗಿದೆ.
ಎನ್.ಎಸ್. ಖೇಡ ನಿಧನಕ್ಕೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.