Breaking News

ಅಂತರ್ ಜಿಲ್ಲಾ‌, ಅಂತರ್ ರಾಜ್ಯ ಓಡಾಟವೂ ಬಂದ್​!

Spread the love

ಬೆಂಗಳೂರು: ಕೊರೊನಾ ರೂಪಾಂತರಿಯ ಅಬ್ಬರಕ್ಕೆ ರಾಜ್ಯ ತತ್ತರಿಸಿ ಹೋಗಿದೆ. ದಿನೇ ದಿನೇ ಕೊರೊನಾ ಹೆಚ್ಚಳವಾಗುತ್ತರಿಂದ ರಾಜ್ಯ ಸರ್ಕಾರ 10 ದಿನಗಳ ಕಾಲ ಇಡೀ ರಾಜ್ಯವನ್ನ ಕಠಿಣ ಕ್ರಮಗಳೊಂದಿಗೆ ಲಾಕ್​ ಡೌನ್​ ಮಾಡಲು ನಿರ್ಧರಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಸೋಮವಾರದಿಂದ(ಮೇ 10) 10 ದಿನಗಳ ಕಾಲ ಇಡೀ ರಾಜ್ಯ ಸ್ತಬ್ಧವಾಗಿರುತ್ತೆ. ಹೀಗಾಗಿ ಸರ್ಕಾರ ಎಲ್ಲವನ್ನೂ ಬಂದ್ ಮಾಡಲು ನಿರ್ಧರಿಸಿದೆ.

ವಿಮಾನ, ರೈಲು, ಆಫೀಸ್​ ಎಲ್ಲಾ ಬಂದ್​!
ಅಂತರ್ ಜಿಲ್ಲಾ‌, ಅಂತರ್ ರಾಜ್ಯ ಓಡಾಟವನ್ನ ಸರ್ಕಾರ ನಿರ್ಬಂಧ ಮಾಡಿದ್ದು. ಪಬ್, ಬಾರ್, ರೆಸ್ಟೋರೆಂಟ್​ನ್ನ ಕ್ಲೋಸ್ ಮಾಡಲಿದೆ. ಅಷ್ಟೇ ಅಲ್ಲದೇ, ಪಾರ್ಸಲ್ ಸೇವೆಗೂ ಈ ಲಾಕ್​​ಡೌನ್​ನಲ್ಲಿ ಕತ್ತರಿ ಬೀಳಲಿದೆ. ಬ್ಯೂಟಿ ಪಾರ್ಲರ್, ಸಲೂನ್ ಅಂಗಡಿಗಳಿಗೆ ಬೀಗ ಜಡಿಯಲಾಗುವುದು. ಗಾರ್ಮೆಂಟ್ಸ್, ಕೈಗಾರಿಕೆ, ಬೃಹತ್ ಕೈಗಾರಿಕಾ ಕ್ಷೇತ್ರಗಳು ಸಂಪೂರ್ಣ ಬಂದ್ ಆಗಲಿವೆ. ಸರ್ಕಾರಿ ಮತ್ತು ಐಟಿ-ಬಿಟಿ ಕಂಪನಿಗಳು ಬಂದ್. ಕಾಲೇಜುಗಳು ಕೂಡ ಬಂದ್ ಜೊತೆಗೆ ಖಾಸಗಿ ಮತ್ತು ಸರ್ಕಾರಿ ಸಾರಿಗೆ ವ್ಯವಸ್ಥೆ ಇರೋದಿಲ್ಲ. ಬರೀ ವೈದ್ಯಕೀಯ ಸೇವೆಗೆ ಮಾತ್ರವೇ ಅವಕಾಶ ಕಲ್ಪಿಸಲಾಗಿದೆ.


Spread the love

About Laxminews 24x7

Check Also

ತಮ್ಮ ವಿರುದ್ದ ದಾಖಲಾಗಿರುವ ಎಫ್​ಐಆರ್ ಕುರಿತು ಪ್ರತಿಕ್ರಿಯಿಸಿದಚಿದಾನಂದ ಸವದಿ

Spread the loveಚಿಕ್ಕೋಡಿ (ಬೆಳಗಾವಿ) : ಕಳೆದ ಮೂರು ದಿನಗಳ ಹಿಂದೆ ನಡೆದಿರುವ ಷಡ್ಯಂತ್ರದ ವಿರುದ್ಧ ಅಥಣಿ ಮತಕ್ಷೇತ್ರದ ರೈತಬಾಂಧವರು ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ