Breaking News

ಯುವತಿಗೆ ರಕ್ಷಣೆ ನೀಡಲು ರಾಜ್ಯ ಮಹಿಳಾ ಆಯೋಗ ಬದ್ಧ: ಪ್ರಮೀಳಾ ನಾಯ್ಡು

Spread the love

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿರುವ ಯುವತಿ ತನಗೆ ಹಾಗೂ ತನ್ನ ತಂದೆ – ತಾಯಿಗಳಿಗೆ ರಕ್ಷಣೆ ನೀಡುವಂತೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಮಹಿಳಾ ಆಯೋಗ ಯುವತಿ ರಕ್ಷಣೆ ನಮ್ಮ ಜವಾಬ್ದಾರಿ ಎಂದು ಹೇಳಿದೆ.

ಈ ಕುರಿತು ಮಾತನಾಡಿರುವ ಮಹಿಳಾ ಆಯೋಗದ ಅಧ್ಯಕ್ಷೆ, ಒಂದು ಹೆಣ್ಣು ಮಗಳು ತಾನು ತೊಂದರೆಯಲ್ಲಿದ್ದೇನೆ ರಕ್ಷಣೆ ನೀಡಿ ಎಂದು ಕೇಳುವಾಗ ರಕ್ಷಣೆ ನೀಡುವುದು ಮಹಿಳಾ ಆಯೋಗದ ಕರ್ತವ್ಯ. ಹಾಗಾಗಿ ಸಿಡಿಯಲ್ಲಿರುವ ಯುವತಿ ಯಾರೇ ಆಗಿರಲಿ, ಆಕೆ ಯಾರು? ಆಕೆಯ ಹಿನ್ನೆಲೆಯೇನು? ಆಕೆಯ ಹಿಂದೆ ರಾಜಕೀಯ ನಾಯಕರಿದ್ದಾರೆಯೇ ಇದೆಲ್ಲವೂ ನಮಗೆ ಅನಗತ್ಯ. ಆಕೆ ಒಂದು ಹೆಣ್ಣುಮಗಳು ಎಂಬ ಕಾರಣಕ್ಕೆ ಆಯೋಗದಿಂದ ರಕ್ಷಣೆ ನೀಡುವುದು ಜವಾಬ್ದಾರಿ ಎಂದು ಹೇಳಿದರು.

 

ಹಾಗಾಗಿ ಸಿಡಿ ಯುವತಿ ಧೈರ್ಯವಾಗಿ ಬಂದು ಆಯೋಗಕ್ಕೆ ದೂರು ನೀಡಬಹುದು. ಆಕೆಯ ರಕ್ಷಣೆ ಜವಾಬ್ದಾರಿ ನಮ್ಮದು. ಈ ಬಗ್ಗೆ ಈಗಾಗಲೇ ನಾನು ಗೃಹ ಇಲಾಖೆಗೆ ಹಾಗೂ ಪೊಲೀಸ್ ಕಮೀಷನರ್ ಅವರಿಗೂ ಮಾಹಿತಿ ನೀಡಿದ್ದೇನೆ. ಯುವತಿ ಹೆದರುವ ಅಗತ್ಯವಿಲ್ಲ ದೂರು ನೀಡಲಿ ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಸ್ನೇಹಿತರೊಂದಿಗೆ ಪಾನಿಪುರಿ ತಿನ್ನಲು ಹೋದವನ ಮೇಲೆ ಹಲ್ಲೆ ; ಚಿಕಿತ್ಸೆ ಫಲಿಸದೇ ಸಾವು

Spread the loveಬೆಂಗಳೂರು : ಪಾನಿಪುರಿ ತಿನ್ನಲು ಹೋದಾಗ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ನಂದಿನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ