Breaking News

ಸಭಾಪತಿ ರಾಜ್ಯಪಾಲರ ಮಾತು ಕೇಳಬೇಕೆಂದಿಲ್ಲ: ಬಿ.ಕೆ. ಹರಿಪ್ರಸಾದ್

Spread the love

ಬೆಂಗಳೂರು: ಸದನದಲ್ಲಿ ನಡೆದ ಘಟನೆ ಸರಿಯಲ್ಲ. ಈ ರೀತಿಯಾಗಿ ನಡೆಯಬಾರದಿತ್ತು ಅಂತಾ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

ವಿಧಾನ ಪರಿಷತ್ ನ ಕಲಾಪದಲ್ಲಿ ನಡೆದ ಗಲಾಟೆ, ನೂಕಾಟ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಭಾಪತಿಗಳು ಸದನಕ್ಕೆ ಬರುವ ಮೊದಲೇ ಬಾಗಿಲು ಹಾಕಿದ್ದು, ಕಾನೂನು ಬಾಹಿರ. ಸಭಾಪತಿಗಳಿಗೆ ಅಪಮಾನ ಇತಿಹಾಸದಲ್ಲಿಯೇ ಇಲ್ಲ. ಎಂದರು.

ಸಭಾಪತಿ ಇರುವಾಗಲೇ ಉಪ ಸಭಾಪತಿ ಪೀಠ ಅಲಂಕರಿಸಿರುವುದು ತಪ್ಪು. ರಾಜಭವನದ ಗೌರವ ಹಾಳು ಮಾಡಿದ್ದಾರೆ. ರಾಜ್ಯಪಾಲರು ನಿರ್ದೇಶನ ಕೊಡುವ ಮಾತೇ ಇಲ್ಲ. ಸಭಾಪತಿಗಳೇ ಸುಪ್ರೀಂ, ಸಭಾಪತಿ ರಾಜ್ಯಪಾಲರ ಮಾತು ಕೇಳಬೇಕೆಂದು ಇಲ್ಲ ಎಂದರು.

ಸಿಎಂ ಬಿಎಸ್ ವೈ ವಿರುದ್ದ ವಾಗ್ದಾಳಿ:

ಸಿಎಂ ಯಡಿಯೂರಪ್ಪ ಮೇಲೆ ವಿಶ್ವಾಸ ಇಲ್ಲ ಅಂದ ಕೂಡಲೇ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರಾ? ಎಂದು ಪ್ರಶ್ನಿಸಿದ ಹರಿಪ್ರಸಾದ್, ಯತ್ನಾಳ್ ಸೇರಿದಂತೆ ಹಲವರು ವಿಶ್ವಾಸ ಇಲ್ಲ ಅಂತಾ ಹೇಳಿಕೆ ನೀಡುತ್ತಿದ್ದಾರೆ. ಯಡಿಯೂರಪ್ಪ ರಾಜಿನಾಮೆ ಕೊಡ್ತಾರಾ ಅಂತ ಮಾಡಿದರು.


Spread the love

About Laxminews 24x7

Check Also

ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆ ನಿಮ್ಮ ನಂಬಿಕೆ ಉಳಿಸಿಕೊಂಡು, ತಾಲ್ಲೂಕಿನ ರೈತರು ಮತ್ತು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ

Spread the loveಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (BDCC) ಬ್ಯಾಂಕ್‌ನ ನಿರ್ದೇಶಕರ ಸ್ಥಾನಕ್ಕೆ ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ