Breaking News
Home / Uncategorized / ಶಾಸಕ ಯತ್ನಾಳ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದ ಕನ್ನಡಪರ ಸಂಘಟನೆ

ಶಾಸಕ ಯತ್ನಾಳ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದ ಕನ್ನಡಪರ ಸಂಘಟನೆ

Spread the love

ಗೋಕಾಕ್: ಕನ್ನಡಪರ ಸಂಘಟನೆಗಳನ್ನು ‘ರೋಲ್‍ಕಾಲ್ ಹೋರಾಟಗಾರರು ಎಂದು ಕರೆದಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆಯನ್ನು ಖಂಡಿಸಿ ಆಕ್ರೋಶಗೊಂಡಿರುವ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ರಸ್ತೆ ತಡೆದು ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಶಾಸಕ ಯತ್ನಾಳ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಶಾಸಕ ಯತ್ನಾಳ್ ಒಬ್ಬ ಬ್ಲಾಕ್‍ಮೇಲ್ ಶಾಸಕನಿದ್ದಂತೆ, ಕನ್ನಡಪರ ಸಂಘಟನೆಗಳಿಗೆ ಅಪಮಾನ ಮಾಡುವ ಮೂಲಕ ಕರ್ನಾಟಕದ ಜನರಿಗೆ ಅಪಮಾನ ಮಾಡಿದ್ದಾರೆ. ಕೂಡಲೇ ಸಿಎಂ ಯಡಿಯೂರಪ್ಪರವರ ಸರಕಾರ ಶಾಸಕ ಯತ್ನಾಳ್‍ರನ್ನು ಸಂಪುಟದಿಂದ ವಜಾ ಮಾಡಬೇಕು.

ಕನ್ನಡಪರ ಸಂಘಟನೆಗಳನ್ನು ಯತ್ನಾಳ್ ಎದುರು ಹಾಕಿಕೊಂಡಿದ್ದಾರೆ. ಇನ್ನೂ ಮುಂದೆ ಅವರು ಯಾವುದೇ ಕಾರ್ಯಕ್ರಮ ಮಾಡಲಿ ಅವರ ಕಾರ್ಯಕ್ರಮವನ್ನು ಬಹಿಷ್ಕರಿಸುವ ಮೂಲಕ ಅವರ ಮುಖಕ್ಕೆ ಕಪ್ಪು ಮಸಿ ಬಳಿಯುವ ಕೆಲಸ ಮಾಡುತ್ತೇವೆ.

ಅವರು ಹೀಗೆ ಕನ್ನಡಪರ ಸಂಘಟನೆಗಳನ್ನು ಅಪಮಾನಿಸುವುದ್ದನ್ನು ಮುಂದುವರೆಸಿದರೆ ಅವರ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಎಚ್ಚರಿಕೆ ನೀಡಿದರು.

ಈ ಸಂರ್ಧಭದಲ್ಲಿ ಕೃಷ್ಣಾ ಖಾನಪ್ಪನವರ , ದೀಪಕ ಹಂಜಿ , ಹನೀಫ ಸನದಿ , ನಿಜಾಮ ನದಾಫ್ , ಮಲ್ಲು ಸಂಪಗಾರ , ಕಿರಣ ತೊಗರಿ , ರಾಮಪ್ಪಾ ಸಣ್ಣಲಗಮ್ಮನವರ , ಬಸು ಗಾಡಿವಡ್ಡರ , ರಾಮ ಕೊಂಗನ್ನೊಳ್ಳಿ ,ರಾಮ ಕುಡೆಮ್ಮಿ , ಶೆಟ್ಟೆಪ್ಪಾ ಗಾಡಿವಡ್ಡರ , ಸುರೇಶ ಪತ್ತಾರ , ದುಂಡಪ್ಪಾ ಬಾವಿಕಟ್ಟಿ , ವಿಠ್ಠಲ ಹಂಜಿ , ಯಲ್ಲಾಲಿಂಗ ಕಪ್ಪಲಗುದ್ದಿ , ಸತ್ತಾರ ಬೇಪಾರಿ , ಹಣಮಂತ ಅಮ್ಮಣಗಿ , ಆನಂದ ಬಿರಡಿ , ಯಮನಪ್ಪಾ ಕಡಕೋಳ , ಹನಮಂತ ಮೆಗಡಿ , ಭೂಮಿಕಾ ತಹಶೀಲ್ದಾರ , ಲಕ್ಮೀ ಬಿ ಕೆ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು .


Spread the love

About Laxminews 24x7

Check Also

ಮುಂಗಾರು ಆರಂಭವಾಗುವವರೆಗೂ ಹೆಚ್ಚಿನ ಗುಡುಗು- ಧೂಳು ಸಹಿತ ಬಿರುಗಾಳಿ: IMD ಎಚ್ಚರಿಕೆ

Spread the love ಬೆಂಗಳೂರು: ನೈಋತ್ಯ ಮಾನ್ಸೂನ್ ಪ್ರಾರಂಭವಾಗುವವರೆಗೆ ಹೆಚ್ಚಿನ ಗುಡುಗು ಮತ್ತು ಧೂಳು ಸಹಿತ ಬಿರುಗಾಳಿ ಬೀಸುವ ಸಾಧ್ಯತೆಯಿದೆ, ಆದರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ