Breaking News

ಏರಿಯಾದಲ್ಲಿ ಹವಾ ಮೇಂಟೇನ್​ ಮಾಡೋಕೆ ಹೋಗಿ ಯುವಕನೊಬ್ಬನನ್ನು ಆತನ ಗೆಳೆಯರೇ ಕೊಲೆಗೈದಿರುವ ಘಟನೆ

Spread the love

ಬೆಂಗಳೂರು: ಏರಿಯಾದಲ್ಲಿ ಹವಾ ಮೇಂಟೇನ್​ ಮಾಡೋಕೆ ಹೋಗಿ ಯುವಕನೊಬ್ಬನನ್ನು ಆತನ ಗೆಳೆಯರೇ ಕೊಲೆಗೈದಿರುವ ಘಟನೆ ನಿನ್ನೆ ಸಂಜೆ ಗಂಗಮ್ಮನಗುಡಿಯಲ್ಲಿ‌ ನಡೆದಿದೆ. ಕಾರ್ತಿಕ್(25) ಹತ್ಯೆಯಾದ ಯುವಕ.

ಕಾರ್ತಿಕ್​ ಸ್ನೇಹಿತ ಅಶೋಕ್ ಹಾಗೂ ಆತನ ಸಹಚರರಿಂದ ಕೃತ್ಯ ಎಸಗಲಾಗಿದೆ ಎಂಬ ಮಾಹಿತಿ ದೊರೆತಿದೆ. ಅಂದ ಹಾಗೆ, ಹತ್ಯೆಯಾದ ಕಾರ್ತಿಕ್ ಮತ್ತು ಹಂತಕ ಅಶೋಕ್ ಒಂದೇ ಗ್ಯಾಂಗ್​ನ ಸದಸ್ಯರಂತೆ.

ನಿನ್ನೆ ಮಧ್ಯಾಹ್ನ ಎಲ್ಲರೂ ಸೇರಿ ಎಣ್ಣೆ ಪಾರ್ಟಿ ಮಾಡಿದ ಬಳಿಕ ಅವರ ನಡುವೆಯೇ ಗಲಾಟೆ ಶುರುವಾಗಿದೆ. ಏರಿಯಾದಲ್ಲಿ ಹವಾ ಮೇಂಟೇನ್​ ಮಾಡೋಕೆ ನಾ ಮುಂದು ತಾ ಮುಂದು ಎಂದು ಮಾತು ಶುರುವಾಗಿ ಇಬ್ಬರ ಮಧ್ಯೆ ವಗ್ವಾದ ನಡೆದಿದೆ ಎಂದು ಹೇಳಲಾಗಿದೆ. ಕೊನೆಗೆ ಅಶೋಕ್ ಅಂಡ್ ಗ್ಯಾಂಗ್​, ಸಿಟ್ಟಿನಲ್ಲಿ, ತರಕಾರಿ ಕತ್ತರಿಸುವ ಚಾಕುವಿನಿಂದ ಕಾರ್ತಿಕ್​ನ ಬರ್ಬರವಾಗಿ ಕೊಲೆಗೈದಿದ್ದಾರಂತೆ.

ಸದ್ಯ, ಈ ಬಗ್ಗೆ ಗಂಗಮ್ಮನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಶೋಕ್ ಮತ್ತು ಆತನ ಸಹಚರರ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.


Spread the love

About Laxminews 24x7

Check Also

RSS ಮನುಸ್ಮೃತಿಯನ್ನು ಬಿಜೆಪಿ ಮುಖಂಡರು ಅವರ ಮನೆಯಲ್ಲಿ ಜಾರಿಗೆ ತರಲಿ: ಸಚಿವ ಪ್ರಿಯಾಂಕ ಖರ್ಗೆ

Spread the loveಕಲಬುರಗಿ: “ಆರ್​ಎಸ್​ಎಸ್​ನಲ್ಲಿನ ಮನುಸ್ಮೃತಿಯನ್ನು ಬಿಜೆಪಿ ಮುಖಂಡರು ಅವರ ಮನೆಯಲ್ಲಿ ಜಾರಿಗೆ ತರಲಿ. ಕೊಳಕು ಮನಸ್ಸು, ಕೊಳಕು ಬುದ್ದಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ