Breaking News

ಮೋದಿಜಿ ನಿರುದ್ಯೋಗಿಗಳ ಕಷ್ಟ ನೋಡಲು ಯಾವ ಕನ್ನಡಕ ಬೇಕು ಹೇಳಿ, ತರಿಸಿಕೊಡ್ತೀವಿ”

Spread the love

ಬೆಂಗಳೂರು, ಸೆ.3- ನಿರುದ್ಯೋಗಿಗಳ ಕಷ್ಟ ನೋಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಯಾವ ರೀತಿಯ ಕನ್ನಡಕಬೇಕು ಹೇಳಿ. ಅದು ಎಷ್ಟೇ ಖರ್ಚಾರಲಿ, ಎಲ್ಲೇ ಇರಲಿ ತರಿಸಿಕೊಡುತ್ತೇವೆ ಎಂದು ಯುವ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೂರ್ಯಗ್ರಹಣ ನೋಡುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎರಡುವರೆ ಲಕ್ಷ ರೂಪಾಯಿ ಖರ್ಚು ಮಾಡಿ ಜಪಾನ್‍ನಿಂದ ಕನ್ನಡಕವೊಂದನ್ನು ತರಿಸಿಕೊಂಡಿದ್ದರು.

ದುರಾದೃಷ್ಟವಶಾತ್ ಮೋಡ ಕವಿದಿದ್ದರಿಂದ ಸೂರ್ಯಗ್ರಹಣ ನೋಡಲಾಗಲಿಲ್ಲ, ಕನ್ನಡಕ ಬಳಕೆಯಾಗಲಿಲ್ಲ. ಈಗ ದೇಶಾದ್ಯಂತ ವಿದ್ಯಾವಂತರು, ಕೂಲಿ ಕಾರ್ಮಿಕರು, ರೈತರು, ಕಾರ್ಮಿಕರು, ಯುವಕರು ಕೆಲಸ ಇಲ್ಲದೆ ಸಂಕಷ್ಟದಲ್ಲಿದ್ದಾರೆ.

ಅದು ಮೋದಿ ಅವರಿಗೆ ಕಾಣುತ್ತಿಲ್ಲ. ಯಾವ ಕನ್ನಡಕ ಹಾಕಿದರೆ ನಿರುದ್ಯೋಗಿಗಳ ಕಷ್ಟ ಮೋದಿ ಅವರಿಗೆ ಕಾಣುತ್ತದೆ ಎಂದು ಹೇಳಿದರೆ ಆ ಕನ್ನಡಕವನ್ನು ಎಲ್ಲೇ ಇದ್ದರೂ ತರಿಸಿಕೊಡುತ್ತೇವೆ. ಅದರಿಂದಲಾದರೂ ನಿರುದ್ಯೋಗಿಗಳ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.


Spread the love

About Laxminews 24x7

Check Also

ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ತಾಲೂಕು ಆಡಳಿತಗಳು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿವೆ.

Spread the loveಶಿವಮೊಗ್ಗ/ಉತ್ತರಕನ್ನಡ: ರಾಜ್ಯದ ಮಲೆನಾಡು ಭಾಗದ ಹಲವೆಡೆ ಮತ್ತೆ ಮಳೆಯ ಆರ್ಭಟ ಮುಂದುವರೆದಿದೆ. ಭಾರಿ ವರ್ಷಧಾರೆ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ