ನವವಿವಾಹಿತೆಯೊಬ್ಬರು ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಮಹಾದೇವಪುರದಲ್ಲಿ ಈ ಘಟನೆ ನಡೆದಿದೆ. ಕಾರಿಪಾಲಯ್ಯನಹಟ್ಟಿ ಮೂಲದ ಸುಮಲತಾ (21) ಮೃತ ದುರ್ದೈವಿ. ಘಟನೆ ಸಂಬಂಧ ಗುಂಡಯ್ಯನಹಟ್ಟಿ ಗಜೇಂದ್ರ ಮತ್ತಿತರರ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.
ಮೂರು ದಿನಗಲ ಹಿಂದೆ ಸುಮಲತಾ ಮನೆಬಿಟ್ಟು ಗಜೇಂದ್ರ ಜೊತೆ ತೆರಳಿದ್ದಳು. ಅಲ್ಲದೇ ಸುಮಲತಾ, ಗಜೇಂದ್ರ ಪ್ರೇಮ ವಿವಾಹ ಆಗಿದ್ದರು. ಆದರೆ ಈಗ ಮಹಾದೇವಪುರ ಬಾವಿಯಲ್ಲಿ ಸುಮಲತಾ ಶವವಾಗಿ ಪತ್ತೆಯಾಗಿದ್ದಾರೆ. ನಾಯಕನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Laxmi News 24×7