ರಾಮದುರ್ಗ: ಪ್ರತಿ ವಾರ ನಡೆಯುವ ಶ್ರೇಷ್ಠ ಫೌಂಡೇಶನ್ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಇಂದು ಶಾಸಕ ರಮೇಶ್ ಜಾರಕಿಹೊಳಿ ಅವರು ಚಾಲನೆ ನೀಡಿದರು.

ಈ ಶನಿವಾರ ರಾಮದುರ್ಗ ತಾಲೂಕಿನ ಕಂಕಣವಾಡಿ ಗ್ರಾಮದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ಇದ್ದು, ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ರಮೇಶ್ ಜಾರಕಿಹೊಳಿ ಅವರು ತಮ್ಮ ಮೊಮ್ಮಗ ಸೂರ್ಯ ಶ್ರೇಷ್ಠ ಸಂತೋಷ್ ಜಾರಕಿಹೊಳಿ ಅವರ ಫೌಂಡೇಶನ್ ಅನ್ನ ಸಂತರ್ಪಣೆ ಕಾರ್ಯಕ್ರಮ ಕಂಡು ಖುಷಿಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ನಮ್ಮ ಮೊಮ್ಮಗ ಸೂರ್ಯ ಶ್ರೇಷ್ಠ ಸಂತೋಷ್ ಜಾರಕಿಹೊಳಿ ಅವರ ಫೌಂಡೇಶನ್ ಅನ್ನ ಸಂತರ್ಪಣೆ ಕಾರ್ಯಕ್ರಮ ಹೀಗೆ ಮುಂದುವರೆಯಲಿ, ನಮ್ಮ ಮೊಮ್ಮಗ ಮೇಲೆ ದೇವರ ಆಶೀರ್ವಾದ ಇರಲಿ ಎಂದು ಶುಭ ಹಾರೈಸಿದರು

ಈ ಸಂದರ್ಭದಲ್ಲಿ ಮುಖಂಡರು ಯಲ್ಲಪ್ಪಾ ಮಡ್ಡಿ. ಸಿದ್ದಪ್ಪಾ ಮಡ್ಡಿ. ಮೆಹಬೂಬಸಾಬ ಮುಜಾವರ. ಬಾಲನಗೌಡಾ ಪಾಟೀಲ.ಬಾಷಾ ಮುಜಾವರ. ಜೆ.ಆರ್. ಮಡ್ಡಿ. ಮಾರುತಿ ಶೆರೆಗಾರ. ಫಕೀರಪ್ಪಾ ಮಾದರ ಹಾಗೂ ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.
Laxmi News 24×7