Breaking News

ಕಾರ್ಮೋಡ ಕವಿದಿತು, ಅಂತರಂಗದ ಪಕ್ಷಿ ಹಾರಿತು, ಕೆರೆ ಕಟ್ಟೆ ತುಂಬಿ ಹರಿದಾವು ಪರಾಕ್ – ಮುಳ್ಳುಗದ್ದುಗೆ ಮೇಲೆ ಕುಣಿದು ಕಾರ್ಣಿಕ!

Spread the love

ದಾವಣಗೆರೆ: ಶಿವರಾತ್ರಿ ಪ್ರಯುಕ್ತ ಚನ್ನಗಿರಿ  ತಾಲೂಕಿನ ಕೆಂಗಾಪುರ ಗ್ರಾಮದ ಉತ್ಸವದಲ್ಲಿ ರಾಮಲಿಂಗೇಶ್ವರ ಸ್ವಾಮೀಜಿ ಮುಳ್ಳುಗದ್ದುಗೆ  ಏರಿ ಕಾರ್ಣಿಕ ನುಡಿದಿದ್ದಾರೆ. ಮುಳ್ಳುಗದ್ದುಗೆ ಏರಿ ಕುಣಿದ ನಂತರ, ಕಾರ್ಮೋಡ ಕವಿದಿತು, ಅಂತರಂಗದ ಪಕ್ಷಿ ಹಾರಿತು, ಕೆರೆ ಕಟ್ಟೆಗಳು ತುಂಬಿ ಹರಿದಾವು ಪರಾಕ್ ಎಂದು ಸ್ವಾಮೀಜಿ ಕಾರ್ಣಿಕ ನುಡಿದಿದ್ದಾರೆ.

ಈ ಬಾರಿ ಉತ್ತಮ ಮಳೆಯಾಗಿ ಕೆರೆ ತೊರೆಗಳು ತುಂಬಿ ತುಳಕಲಿವೆ. ಉತ್ತಮ ಬೆಳೆ ಬರಲಿದೆ. ಜನರಿಗೆ ಪ್ರಯಾಣದಲ್ಲಿ ಸಾಕಷ್ಟು ದುರಂತ ನಡೆದು, ಸಾವು ನೋವು ಸಂಭವಿಸಲಿದೆ. ಪ್ರಯಾಣದಲ್ಲಿ ನಿಧಾನ ಸೂಕ್ತ, ಇದು ಎಲ್ಲರಿಗೂ ಅನ್ವಯ. ರಾಜಕಾರಣಿಗಳು ಜನಸೇವೆಯಲ್ಲಿ ಹೆಚ್ಚು ತೊಡಗಬೇಕು, ಜನರು ಭೇಷ್ ಎನ್ನಬೇಕು. ರಾಜಕಾರಣಿಗಳು ವೇಗ ಕಡಿಮೆ ಮಾಡಿಕೊಂಡು ಜನಸೇವೆ ಮಾಡುವಂತೆ ಸ್ವಾಮೀಜಿ ಸೂಚಿಸಿದ್ದಾರೆ. ಈ ರೀತಿ ಕಾರ್ಣಿಕದ ತಾತ್ಪರ್ಯ ವಿವರಿಸಿದ್ದಾರೆ.

ಪ್ರತಿ ವರ್ಷ ಶಿವರಾತ್ರಿ ಜಾಗರಣೆ ನಂತರ ಈ ಜಾತ್ರೆ ನಡೆಯುತ್ತದೆ. ಜಾತ್ರೆ ವೇಳೆ ಅದ್ದೂರಿಯಾಗಿ ಮುಳ್ಳುಗದ್ದುಗೆಯ ಉತ್ಸವ ನಡೆಯುತ್ತದೆ. ನೂರಾರು ಭಕ್ತರು ಮುಳ್ಳುಗದ್ದುಗೆ ಉತ್ಸವದಲ್ಲಿ ಭಾಗಿಯಾಗಿದ್ದು, ಸ್ವಾಮೀಜಿಗಳ ದರ್ಶನ ಪಡೆಯುತ್ತಿದ್ದಾರೆ. ಸ್ವಾಮೀಜಿ ಭವಿಷ್ಯ ನಿಜವಾಗಲಿದೆ ಎಂಬುದು ಜನರ ನಂಬಿ


Spread the love

About Laxminews 24x7

Check Also

ನಮ್ಮ ಕ್ಷೇತ್ರದಲ್ಲಿ ಸಮರ್ಥ್‌ರನ್ನು ಗೆಲ್ಲಿಸುತ್ತೇವೆ – ಉಪಕದನದಿಂದ ಹಿಂದೆ ಸರಿದ ಪೈಲ್ವಾನ್‌

Spread the loveಬೆಂಗಳೂರು: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ  ಕಾಂಗ್ರೆಸ್‌  ಬಂಡಾಯಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ನಾಮಪತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ