Breaking News

ಜಗತ್ತಿನ ಯಾವುದೇ ಮೂಲೆಗೆ ಹೋದರೂ ಸಿವಿಲ್​ ಇಂಜಿನಿಯರಿಂಗ್​ಗೆ ಮಹತ್ವದ ಸ್ಥಾನವಿದೆ.: ಸುಧಾಮೂರ್ತಿ

Spread the love

ಬೆಳಗಾವಿ: ಜಗತ್ತಿನ ಯಾವುದೇ ಮೂಲೆಗೆ ಹೋದರೂ ಸಿವಿಲ್​ ಇಂಜಿನಿಯರಿಂಗ್​ಗೆ ಮಹತ್ವದ ಸ್ಥಾನವಿದೆ.

ಹಾಗಾಗಿ, ಸಿವಿಲ್​ ಇಂಜಿನಿಯರಿಂಗ್​ ಎಂಬುದು ಮದರ್​ ಆಫ್​ ಇಂಜಿನಿಯರ್ಸ್​ ಎಂದು ಇನ್ಫೋಸಿಸ್‌ ಫೌಂಡೇಷನ್​ ಮುಖ್ಯಸ್ಥೆ, ಪದ್ಮಭೂಷಣ ಪುರಸ್ಕೃತೆ ಡಾ.ಸುಧಾಮೂರ್ತಿ ಹೇಳಿದರು.

ಬೆಳಗಾವಿಯ ಕೆಎಲ್​ಇ ಸಂಸ್ಥೆಯ ಜೀರಗೆ ಸಭಾಭವನದಲ್ಲಿ ನಡೆದ ‘ದಿ ಇನಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್’ ವತಿಯಿಂದ ಹಮ್ಮಿಕೊಂಡಿದ್ದ ಸಿವಿಲ್​ ಇಂಜಿನಿಯರ್ಸ್​ 38ನೇ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸಿವಿಲ್​ ಇಂಜಿನಿಯರಿಂಗ್​ ಕುರಿತು ಬಣ್ಣಿಸಿದರು.

“ಹಣವೇ ಎಲ್ಲ ಖುಷಿ ಕೊಡುತ್ತದೆ ಎಂಬುದು ಸರಿಯಲ್ಲ. ಹಾಗಂತ ಹಣದಿಂದ ಖುಷಿ ಸಿಗಲ್ಲ ಎಂದೇನಿಲ್ಲ. ಆದರೆ, ಹಣಕ್ಕಿಂತ ಹೆಚ್ಚಾಗಿ ಕಾಂಬಿನೇಷನ್​ ಬೇಕು. ವೃತ್ತಿ ನೈತಿಕತೆ ಜೊತೆಗೆ ಪರಿಶ್ರಮ ಬೇಕು. ಹೀಗಿದ್ದಾಗ ಮಾತ್ರ ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು. ಅದರಿಂದ ಯಶಸ್ಸು ಲಭಿಸುವುದು ಖಂಡಿತ” ಎಂದು ನುಡಿದರು.

“ಎಲ್ಲದರಲ್ಲೂ ಪರಿಶ್ರಮ, ನೈತಿಕತೆ ಜೊತೆಗೆ ಟೀಮ್​ ವರ್ಕ್​ ಕೂಡ ಮುಖ್ಯ. ತಂಡದಲ್ಲಿ ಒಬ್ಬರು ಮುಂದಿರಬಹುದು, ಮತ್ತೊಬ್ಬರು ಹಿಂದಿರಬಹುದು. ಹೀಗಿರುವಾಗ ವೃತ್ತಿ ನೈತಿಕತೆ ಬೇಕು, ಹಣ ಇಲ್ಲದಿದ್ದರೆ ನಮ್ಮ ವೇಗ ಕಡಿಮೆ ಆಗಬಹುದು. ಆದರೆ ಗುಣಮಟ್ಟ ಮತ್ತು ನೈತಿಕವಾಗಿ ಶ್ರಮಿಸಿದರೆ ಹಣ ಎಂಬುದು ನಮ್ಮ ಬಳಿಗೆ ಓಡಿ ಬರುತ್ತದೆ. ಹೀಗಾಗಿ ಹಾರ್ಡ್​ವರ್ಕ್​ ಜೊತೆಗೆ ನೈತಿಕತೆ ಬೆಳೆಸಿಕೊಂಡು ಕೆಲಸ ಮಾಡಿ, ಸಾಧನೆ ಮಾಡಿ. ನಿಮ್ಮ ಪರಿಶ್ರಮಕ್ಕೆ ಯಶಸ್ಸು ಖಂಡಿತ” ಎಂದು ಯುವ ಇಂಜಿನಿಯರಿಂಗ್​ ವಿದ್ಯಾರ್ಥಿಗಳಿಗೆ ಸುಧಾಮೂರ್ತಿ ಕಿವಿ ಮಾತು ಹೇಳಿದರು.


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ