ಭೀಮಾತೀರದ ಮಹಾದೇವ ಸಾಹುಕಾರ್ ಪ್ರಕರಣ : ಒಂದೂವರೆ ಸಾವಿರ ಪೊಲೀಸರು ನಿಯೋಜನೆ
ವಿಜಯಪುರ : ಭೀಮಾತೀರದ ಮಹಾದೇವ ಸಾಹುಕಾರ ಭೈರಗೊಂಡ ಮೇಲಿನ ಗುಂಡಿನ ದಾಳಿ ಪ್ರಕರಣ ತನಿಖೆಗಾಗಿ, ಒಂದೂವರೆ ಸಾವಿರ ಪೊಲೀಸರು ಒಳಗೊಂಡ ಹತ್ತು ತಂಡಗಳುನ್ನು ನಿಯೋಜನೆ ಮಾಡಲಾಗಿದೆ.
ಅಚ್ಚರಿಯಾದರು ಸತ್ಯ. ಯಾವುದಾದರೂ ಒಂದು ಅಪರಾಧ ಪ್ರಕರಣವನ್ನು ಒಬ್ಬಿಬ್ಬರು ಪೊಲೀಸರು ಅಥವಾ ಹತ್ತಾರು ಪೊಲೀಸರ ಒಂದು ತಂಡ ಬೆನ್ನು ಹತ್ತುವುದು ಸಾಮಾನ್ಯ. ಆದರೆ ಈ ಪ್ರಕರಣದ ತನಿಖೆಗಾಗಿ ವಿಜಯಪುರ ಜಿಲ್ಲೆಯ 1500 ಪೊಲೀಸರನ್ನು ನಿಯೋಜಿಸಲಾಗಿದೆ.
ಒಬ್ಬರು ಎಸ್ಪಿ, ಇನ್ನೊಬ್ಬರು ಹೆಚ್ಚುವರಿ ಎಸ್ಪಿ, ಅವರೊಂದಿಗೆ 37 ಇನ್ಸ್ಪೆಕ್ಟರ್ಗಳು ನೇತೃತ್ವದ ಹತ್ತಕ್ಕೂ ಅಧಿಕ ತಂಡಗಳ ರಚನೆಯಾಗಿದೆ. ಘಟನೆ ನಡೆದ ಸ್ಥಳದ ಸುತ್ತಲೂ 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ಪೊಲೀಸರಿಂದ ಶೋಧ ನಡೆಯುತ್ತಿದ್ದು, ಭೀಮಾತೀರದ ಚಡಚಣ, ಕೆರೂರ, ಟಾಕಳಿ, ಉಮರಾಣಿ, ಲೋಣಿ, ಕೊಂಕಣಗಾಂವ ಸುತ್ತಲೂ ಪೊಲೀಸರ ತಂಡ ತನಿಖೆ ನಡೆಸಿದ್ದಾರೆ.