Breaking News

ಪಡುಕೋಣೆ ಚರ್ಚಿನಲ್ಲಿ ಪ್ರಾರ್ಥನೆ- ಧರ್ಮಗುರು ಸೇರಿ 7 ಮಂದಿ ಮೇಲೆ ಕೇಸ್

Spread the love

ಉಡುಪಿ: ಗುಡ್ ಫ್ರೈಡೇ ದಿನವೇ ಚರ್ಚಿನ ಧರ್ಮಗುರು ಮತ್ತು ಪ್ರಾರ್ಥನೆಯಲ್ಲಿ ಪಾಲ್ಗೊಂಡವರ ಮೇಲೆ ಕೇಸು ದಾಖಲಾಗಿದೆ. ಉಡುಪಿ ಜಿಲ್ಲೆ ಬೈಂದೂರು ತಾಲೂಕಿನಲ್ಲಿ ಈ ಘಟನೆ ನಡೆದಿದೆ.

ಪಡುಕೋಣೆಯಲ್ಲಿ ಗುಡ್ ಫ್ರೈಡೇ ಹಿನ್ನೆಲೆಯಲ್ಲಿ ಇಂದು ಸಾಮೂಹಿಕ ಪ್ರಾರ್ಥನೆ ನಡೆದಿದೆ. ಧರ್ಮಗುರು ಮತ್ತು ಆರು ಜನರ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಪಡುಕೋಣೆಯ ಸಂತ ಅಂತೋನಿ ಚರ್ಚ್‍ನಲ್ಲಿ ಇಂದು ಗುಡ್ ಫ್ರೈಡೇ ಪ್ರಾರ್ಥನೆ ನಡೆದಿತ್ತು. ಬೈಂದೂರು ತಾಲೂಕು ನಾಡ ಗ್ರಾಮದಲ್ಲಿರುವ ಚರ್ಚ್ ಧರ್ಮಗುರು ಮತ್ತು ಆರು ಮಂದಿ ಬೆಳಗ್ಗಿನ ಪ್ರಾರ್ಥನೆಯನ್ನು ಚರ್ಚ್ ಹಾಲ್ ನಲ್ಲಿ ನೆರವೇರಿಸಿದ್ದರು.

ಸಾರ್ವಜನಿಕವಾಗಿ ಬಂದ ದೂರಿನ ಹಿನ್ನೆಲೆಯಲ್ಲಿ ಫಾದರ್ ಫ್ರೆಡ್ ಮಸ್ಕರೇನಸ್ ಹಾಗೂ ಆರು ಮಂದಿ ಪ್ರಾರ್ಥನೆ ಮಾಡಿದವರ ಮೇಲೆ ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಯಾರೂ ಸಾಮೂಹಿಕ ಪ್ರಾರ್ಥನೆ ನಡೆಸದಂತೆ ಬಿಷಪ್ ಅವರು ಕೂಡ ಆದೇಶಿಸಿದ್ದರು. ಈ ನಡುವೆಯೂ ಪ್ರಾರ್ಥನೆ ನೆರವೇರಿಸಿದ್ದಕ್ಕೆ ಉಡುಪಿಯ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಕಾಲುವೆಗೆ ಬಿದ್ದು ಮೃತಪಟ್ಟ ನರೇಗಾ ಕೂಲಿಕಾರ ಹನುಮಂತಪ್ಪ ಬಾಗಪ್ಪ

Spread the loveಗಂಗಾವತಿ (ಕೊಪ್ಪಳ) : ನರೇಗಾದ ಕೂಲಿಕಾರರೊಬ್ಬರು ನೀರು ಕುಡಿಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ತುಂಗಭದ್ರಾ ಎಡದಂಡೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ