Breaking News

ಬಹುಭಾಷಾ ನಟಿ, ಕ್ಯೂಟ್ ಬೆಡಗಿನಯನತಾರಾಗೆ ಕಾಡಿದ ಟ್ಯಾಟು

Spread the love

ಚೆನ್ನೈ: ಬಹುಭಾಷಾ ನಟಿ, ಕ್ಯೂಟ್ ಬೆಡಗಿ ನಯನತಾರಾ ದಕ್ಷಿಣ ಭಾರತದ ಸಿನಿ ರಂಗದಲ್ಲಿ ಹೆಸರು ವಾಸಿ, ಅದೇ ರೀತಿ ಅವರು ಬೆಳೆದಿದ್ದಾರೆ ಸಹ. ಘಟಾನುಘಟಿ ನಾಯಕರೊಂದಿಗೆ ತೆರೆ ಹಂಚಿಕೊಳ್ಳುವ ಮೂಲಕ ದಕ್ಷಿಣ ಸಿನಿ ರಂಗದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ನಟನೆಯಲ್ಲಿನ ಅವರ ಸಾಧನೆ ಜೊತೆಗೆ ನಿಜ ಜೀವನದಲ್ಲಿ ಅವರ ಸರಣಿ ಪ್ರೇಮ್ ಕಹಾನಿಗಳು ಸಹ ಅಷ್ಟೇ ಚರ್ಚೆಯಾಗಿದ್ದವು. ಇದೆಲ್ಲದರ ನಡುವೆ ಒಂದು ಟ್ಯಾಟು ನಯನತಾರಾ ಅವರನ್ನು ತುಂಬಾ ಚಿಂತೆಗೆ ದೂಡಿತ್ತು.

ಹೌದು ನಟಿ ನಯನತಾರಾ ಅವರಿಗೆ ಆ ಟ್ಯಾಟು ಸಖತ್ ಹಿಂಸೆ ನೀಡಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ. ಬಣ್ಣದ ಬದುಕಿನ ರೀತಿ ನಿಜ ಜೀವನದಲ್ಲಿಯೂ ಕೆಲವು ಲವ್ ಸ್ಟೋರಿಗಳಿದ್ದು, ಇವೇನು ಗುಟ್ಟಾಗಿ ಉಳಿದಿಲ್ಲ. ಸಿಂಬು, ಪ್ರಭುದೇವ, ವಿಘ್ನೇಶ್ ಶಿವನ್ ಜೊತೆ ನಯನತಾರಾ ಪ್ರೀತಿಯಲ್ಲಿ ಬಿದ್ದ ವಿಚಾರ ತಿಳಿದೇ ಇದೆ. ಹೀಗೆ ಸರಣಿ ಪ್ರೇಮ್‍ಕಹಾನಿಗಳಲ್ಲಿ ಒಂದು ಟ್ಯಾಟು ನಯನತಾರಾಗೆ ಸಿಕ್ಕಾಪಟ್ಟೆ ಕಾಟ ಕೊಟ್ಟಿದೆ. ಇದು ಅವರನ್ನು ದುಃಸ್ವಪ್ನವಾಗಿ ಸಹ ಕಾಡಿದೆ. ಇದನ್ನು ತಗೆಸಲು ಸಹ ಅವರು ಇನ್ನಿಲ್ಲದ ಪ್ರಯತ್ನ ಪಟ್ಟಿದ್ದರು.

ಅದ್ಯಾವ ಪ್ರೇಮ, ಯಾರ ಜೊತೆಗೆ ಅಂತೀರಾ ಇಲ್ಲಿದೆ ನೋಡಿ ಉತ್ತರ. ಖ್ಯಾತ ಡ್ಯಾನ್ಸರ್ ಪ್ರಭುದೇವ ಜೊತೆ ನಯನತಾರಾ 2010ರಲ್ಲಿ ಪ್ರೀತಿಯಲ್ಲಿ ಬಿದ್ದಿದ್ದರು. ಮದುವೆ ಆಗುತ್ತೇವೆ ಎಂಬ ಭರವಸೆ ಇದ್ದಿದ್ದರಿಂದ ಹಚ್ಚೆ ಹಾಕಿಸಿಕೊಂಡಿದ್ದರು. ಆದರೆ ಲವ್ ಶುರುವಾಗಿ ಮೂರೇ ವರ್ಷಕ್ಕೆ ವೈಮನಸ್ಸು ಉಂಟಾಯಿತು. ಪ್ರಭುದೇವ ಮತ್ತು ನಯನತಾರಾ ಬ್ರೇಕಪ್ ಮಾಡಿಕೊಂಡರು.

ಬಳಿಕ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ನಯನತಾರಾ ಸಲುಗೆ ಬೆಳೆಸಿಕೊಂಡರು. ಹೀಗೆ ಪ್ರೀತಿ ಸಹ ಬೆಳೆಯಿತು ಆದರೆ ನಯನತಾರಾ ಕೈ ಮೇಲೆ ಇರುವ ಪ್ರಭುದೇವ ಹೆಸರು ವಿಘ್ನೇಶ್ ಶಿವನ್‍ಗೆ ಕಿರಿಕಿರಿ ಉಂಟು ಮಾಡುತ್ತಿದೆ ಎಂಬ ಗಾಸಿಪ್‍ಗಳು ಹರಿದಾಡಲಾರಂಭಿಸಿದವು. ಇದು ನಯನತಾರಾ ಅವರಿಗೂ ಇರುಸುಮುರುಸು ಉಂಟು ಮಾಡಿತ್ತು. ಹೀಗಾಗಿ ಟ್ಯಾಟು ತಗೆಸಲೇಬೇಕು ಎಂಬ ನಿರ್ಧಾರವನ್ನು ನಯನತಾರಾ ಮಾಡಿದ್ದರು.

ಅಂದಹಾಗೆ ನಯನತಾರಾ ಹಾಕಿಸಿಕೊಂಡ ಟ್ಯಾಟು ಏನು ಗೊತ್ತಾ? ಇಲ್ಲಿದೆ ನೋಡಿ, ಇಂಗ್ಲಿಷ್‍ನ ಪಿ ಅಕ್ಷರದ ಮುಂದೆ ತಮಿಳಿನ ಅಕ್ಷರಗಳನ್ನು ಸೇರಿಸಿ, ಪ್ರಭು ಎಂದು ಹಚ್ಚೆ ಹಾಕಿಸಿಕೊಂಡಿದ್ದರು. ಇದು ವಿಘ್ನೇಶ್ ಅವರಿಗೆ ಮಾತ್ರವಲ್ಲ ಸ್ವತಃ ನಯನತಾರಾ ಅವರಿಗೆ ದುಃಸ್ವಪ್ನವಾಗಿ ಕಾಡಲು ಶುರುವಾಯಿತು. ಅದು ಪರ್ಮನೆಂಟ್ ಟ್ಯಾಟು ಆಗಿದ್ದರಿಂದ ಅಳಿಸುವುದು ಸಹ ಅಷ್ಟು ಸುಲಭವಾಗಿರಲಿಲ್ಲ. ಆದರೆ ಇದಕ್ಕೆ ಮುಕ್ತಿ ಕಾಣಿಸಲೇಬೇಕಿತ್ತು. ಹೀಗಾಗಿ ಉಪಾಯ ಮಾಡಿದ ನಯನತಾರಾ, ಪ್ರಭು ಇದ್ದಿದ್ದನ್ನು ಪಾಸಿಟಿವಿಟಿ ಎಂದು ಬದಲಾಯಿಸಿದರು. ನಂತರ ಈ ಹಚ್ಚೆಯನ್ನು ಬೇಕಂತಲೇ ಹೆಚ್ಚು ಕಾಣುವಂತೆ ಪ್ರದರ್ಶನ ಮಾಡುತ್ತಿದ್ದರು.

ತೆಲುಗು, ತಮಿಳು ಮತ್ತು ಮಲಯಾಳಂ ಇಂಡಸ್ಟ್ರಿಗಳಲ್ಲಿ ನಯನತಾರಾ ಪ್ರಸಿದ್ಧಿ ಪಡೆದಿದ್ದಾರೆ. ಅಲ್ಲದೆ ‘ಸೂಪರ್’ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ನಲ್ಲಿಯೂ ನಟಿಸಿದ್ದಾರೆ. ಚಿತ್ರರಂಗಕ್ಕೆ ಎಂಟ್ರಿ ನೀಡಿ 17 ವರ್ಷಗಳಾದರೂ ಅದೇ ಚಾರ್ಮ್ ಉಳಿಸಿಕೊಂಡು ಬಂದಿದ್ದು, ಈಗಲೂ ಸ್ಟಾರ್ ನಟರಿಗೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.


Spread the love

About Laxminews 24x7

Check Also

1200 ರೈತರ ಆತ್ಮಹತ್ಯೆ: ಕಾಂಗ್ರೆಸ್ ಆಡಳಿತದಲ್ಲಿ ರೈತರ ಜೀವಕ್ಕಿಲ್ಲ ಬೆಲೆ- ಪ್ರಹ್ಲಾದ್ ಜೋಶಿ

Spread the love ಬೆಂಗಳೂರು ಜುಲೈ 26: ರಾಜ್ಯದಲ್ಲಿ ಕಳೆದ 15 ತಿಂಗಳಲ್ಲಿ 1200ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ