Breaking News

ಪೊಲೀಸ್ ಪೇದೆ ಮದುವೆಗೆ ಮುಧೋಳಕ್ಕೆ ಓಡೋಡಿ ಬಂದ ರಾಜ್ಯಪಾಲ ಗೆಹ್ಲೋಟ್…!

Spread the love

ಬೆಳಗಾವಿ : ಸದಾಕಾಲವೂ ತಮ್ಮ ಬೆನ್ನೆಲುಬಾಗಿ ನಿಂತು‌ ಭದ್ರತೆ ಒದಗಿಸುವ ಸಿಬ್ಬಂದಿ ಮದುವೆಗೆ ರಾಜ್ಯಪಾಲರು ಓಡೋಡಿ ಬಂದು ಆಶಿರ್ವದಿಸಿದ ಅಪರೂಪದ ಘಟನೆ ನಡೆದಿದೆ.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಭದ್ರತಾ ಸಿಬ್ಬಂದಿ ಪೊಲೀಸ್ ಕಾನ್ಸ್ಟೇಬಲ್ ಪರಮಾನಂದ ‌ಮಂಟೂರ್ ಮದುವೆ ಕಾರ್ಯಕ್ರಮಕ್ಕೆ ಸ್ವತಃ ರಾಜ್ಯಪಾಲರೇ ಆಗಮಿಸಿ ಶುಭಾಶಯ ತಿಳಿಸಿದ ಅಪರೂಪದ ‌ಘಟನೆ ಕಳೆದ ಶನಿವಾರ ನಡೆದಿದೆ.

ಮುಧೋಳ ‌ಪಟ್ಟಣದಲ್ಲಿ ನಡೆದ ಪರಮಾನಂದ ಮಂಟೂರ್ ಅವರ ಮದುವೆ ಸಮಾರಂಭಕ್ಕೆ ಬೆಂಗಳೂನಿಂದ ಬೆಳಗಾವಿಗೆ ವಿಮಾನ ಮೂಲಕ‌ ಆಗಮಿಸಿ‌ ಶುಭಾಶಯ ತಿಳಿಸಿದ್ದಾರೆ.‌

ಸಧ್ಯ ರಾಜ್ಯಪಾಲರ‌ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ತಮ್ಮ ಭದ್ರತೆಗೆ ನೇಮಿಸಿರುವ ಕೆಳ ಹಂತದ ಸಿಬ್ಬಂದಿಗೂ ಅವರು ನೀಡುವ ಗೌರವ ಇತರರಿಗೂ ಮಾದರಿಯಾಗಿದೆ ಎಂದರೆ ತಪ್ಪಾಗಲಾರದು.


Spread the love

About Laxminews 24x7

Check Also

ಕರ್ನಾಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹೇಮಂತ ನಿಂಬಾಳಕರರಿಗೆ ಪಿತೃಶೋಕ

Spread the loveಕರ್ನಾಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹೇಮಂತ ನಿಂಬಾಳಕರರಿಗೆ ಪಿತೃಶೋಕ; ಡಾ. ಅಂಜಲಿತಾಯಿ ನಿಂಬಾಳಕರರ ಮಾವರ ನಿಧನ. : …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ