ಬೆಂಗಳೂರು : ನಿರೂಪಕಿ ಅನುಶ್ರೀ ಪ್ರಕರಣದಲ್ಲಿ ದಿನಕ್ಕೊಂದು ಹೆಸರುಗಳು ಹೊರ ಬರುತ್ತಿವೆ. ಮಾಜಿ ಸಿಎಂ ಗಳು ಕರೆ ಮಾಡಿದ್ದರ ಬಗ್ಗೆ ಸುದ್ದಿ ಬಂದಿದೆ. ನಾನಂತೂ ತನಿಖೆಗೆ ಒತ್ತಾಯಿಸುತ್ತೇನೆ. ಯಾರು ಆ ಮಾಜಿ ಸಿಎಂ ಕರೆ ಮಾಡಿದ್ದು..? ಯಾರು ಆ ಮಾಜಿ ಮುಖ್ಯಮಂತ್ರಿ ಅಂತ ಕೆಂಡಾಮಂಡಲರಾಗಿದ್ದಾರೆ.
ಈ ಕುರಿತಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರೂಪಕಿ ಅನುಶ್ರೀಗೆ ಮಾಜಿ ಸಿಎಂ ಒಬ್ಬರು ಕರೆ ಮಾಡಿದ್ದರು ಎಂಬುದಾಗಿ ಸುದ್ದಿ ಬರ್ತಾ ಇದೆ. ಎಸ್ ಎಂ ಕೃಷ್ಣಾ, ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಸೇರಿದಂತೆ 6 ಮಾಜಿ ಸಿಎಂ ಗಳಿದ್ದಾರೆ.
ಯಾರು ಆ ಮಾಡಿ ಸಿಎಂ ಎಂದು ಹೇಳಿ ಎಂಬುದಾಗಿ ಗರಂ ಆದರು.
ಇನ್ನೂ ನಾನು ಈ ಸಂಬಂಧ ಸಿಎಂ, ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ. ಸೂಕ್ತ ತನಿಖೆಗೆ ಆಗ್ರಹಿಸುತ್ತೇನೆ. ಪ್ರತಿದಿನ ಒಂದೊಂದು ಹೆಸರು ಕೂಡ ಹೊರ ಬರ್ತಿರೋದ್ರಿಂದ ನಾನಂತೂ ತನಿಖೆಗೆ ಆಗ್ರಹಿಸುತ್ತೇನೆ ಎಂಬುದಾಗಿ ತಿಳಿಸಿದರು.