ಬೆಂಗಳೂರು: ಇಂದು ಅಥವಾ ನಾಳೆಯಿಂದ ರಾಜ್ಯದ ಎಲ್ಲಾ ಚಿತ್ರಮಂದಿರಗಳನ್ನ ಬಂದ್ ಮಾಡ್ತೇವೆ ಅಂತಾ ಕರ್ನಾಟಕ ಚಲನಚಿತ್ರ ಪ್ರದರ್ಶಕ ಸಂಘದ ಅಧ್ಯಕ್ಷ ಕೆ.ವಿ ಚಂದ್ರಶೇಖರ್ ತಿಳಿಸಿದ್ದಾರೆ. ಸರ್ಕಾರದ ಹೊಸ ನಿಯಮದ ಅದೇಶಕ್ಕೂ ಮೊದಲೇ ಚಿತ್ರಮಂದಿರಗಳು ಬಂದ್ ಮಾಡಲು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ನಿರ್ಧರಿಸಿದೆ.
ಈ ಬಗ್ಗೆ ನ್ಯೂಸ್ಫಸ್ಟ್ ಜೊತೆ ಮಾತನಾಡಿರುವ ಕೆ.ವಿ ಚಂದ್ರಶೇಖರ್.. ಇಂದು ಅಥವಾ ನಾಳೆಯಿಂದ ರಾಜ್ಯದ ಎಲ್ಲಾ ಚಿತ್ರಮಂದಿರಗಳನ್ನ ಬಂದ್ ಮಾಡ್ತೇವೆ. ಮೇ ಅಂತ್ಯದವರೆಗೂ ಚಿತ್ರಮಂದಿರಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. ದೊಡ್ಡ ಸ್ಟಾರ್ ನಟರ ಚಿತ್ರಗಳು ರಿಲೀಸ್ ಆದ್ರೆ ಮಾತ್ರ ಮತ್ತೆ ಥಿಯೇಟರ್ ಒಪನ್ ಮಾಡ್ತೀವಿ.
ಸದ್ಯದ ಪರಿಸ್ಥಿತಿಯಲ್ಲಿ ಜನರು ಥಿಯೇಟರ್ಗೆ ಬಂದು ಸಿನಿಮಾ ನೋಡುವ ವಾತಾವರಣ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಥಿಯೇಟರ್ಗಳನ್ನ ಮುಚ್ಚುವುದೇ ಉತ್ತಮ. ಚಿಕ್ಕ ಸಿನಿಮಾಗಳ ರಿಲೀಸ್ ಆದರೂ ಥಿಯೇಟರ್ ಒಪನ್ ಮಾಡಲ್ಲ. ನಾವು ಥಿಯೇಟರ್ ಕರೆಂಟ್ ಬಿಲ್ ಕಟ್ಟಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ರಾಜ್ಯದಲ್ಲಿ 200 ಚಿತ್ರಮಂದಿರ ಮುಚ್ಚಿವೆ ಎಂದು ತಿಳಿಸಿದ್ದಾರೆ.