ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ, ಗೋಕಾಕ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ
ಹಮ್ಮಿಕೊಳ್ಳಲಾದ 2025–26ನೇ ಸಾಲಿನ ನಮ್ಮ ಅಜ್ಜನವರ ಸ್ಮರಣಾರ್ಥದ ‘ದಿವಂಗತ ಶ್ರೀ ಲಕ್ಷ್ಮಣರಾವ್ ಆರ್. ಜಾರಕಿಹೊಳಿ ಮೆಮೋರಿಯಲ್ ಟರ್ಫ್ ಕ್ರಿಕೆಟ್ ಟ್ರೋಫಿ’ ಪಂದ್ಯಾವಳಿಯ ಉದ್ಘಾಟನಾ ಸಮಾರಂಭ
ಮಾನ್ಯ ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಲಖನ್ ಜಾರಕಿಹೊಳಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ಧಾರವಾಡ ವಲಯದ ನಿಮಂತ್ರಕ ಶ್ರೀ ವೀರಣ್ಣ ಸವಡಿ,
ಬಿಡಿಸಿಸಿ ಬ್ಯಾಂಕ್ ನಿರ್ದೇಶಕರು ಅಮರನಾಥ ಜಾರಕಿಹೊಳಿ, ರಾಹುಲ್ ಜಾರಕಿಹೊಳಿ, ಆದಿತ್ಯ ಜಾರಕಿಹೊಳಿ, ಕಿಶೋರ ಶೆಟ್ಟಿ, ಬಸವರಾಜ ಕಲ್ಯಾಣ ಶೆಟ್ಟಿ, ಹಿರೇಗೌಡ ನಾಯ್ಕರ್, ಶಿವಾನಂದ ಗುಂಜಾಲ್, ಅನಿಲ್ ಭವಾನಿ, ಶಿಶಿರ ಭವಾನಿ ಸೇರಿದಂತೆ, ಗೋಕಾಕ ತಹಶಿಲ್ದಾರ ಮೋಹನ್ ಭಸ್ಮೆ ಸೇರಿ ಅನೇಕ ಗಣ್ಯರು, ಸಂಘಟಕರು ಮತ್ತು ಕ್ರಿಕೆಟ್ ಅಭಿಮಾನಿಗಳು ಉಪಸ್ಥಿತರಿದ್ದರು.
Laxmi News 24×7