ಒಂಬತ್ತು ವರ್ಷ ಕಳೆದರೂ ಇಂದು ದಿನವೂ ಅವರು ನಮ್ಮನ್ನು ಅಗಲಿದ್ದಾರೆ ಎಂದು ಅನಿಸಿಲ್ಲ ಅಂತಾರೆ ಸಣ್ಣ ಸಾಹುಕಾರರು
ಹೌದು ಇಂದು ಶ್ರೀ ಲಕ್ಷ್ಮಣರಾವ್ ರಾವ ಜಾರಕಿಹೊಳಿ ದಂಪತಿಗಳ ಪುಣ್ಯ ಸ್ಮರಣೆ,
ಇವತ್ತು ಶ್ರೀ ಲಖನ ಜಾರಕಿಹೊಳಿ ಅವರು ತಂದೆ ತಾಯಿಯ ಬಗ್ಗೆ ಮಾತನಾಡಿ ನಮ್ಮ ಬೆನ್ನೆಲುಬು, ನಮ್ಮ ನಡೆದು ಬಂದ್ ದಾರಿಗೆ ದಾರಿದೀಪ, ನಮ್ಮ ಪ್ರತಿಯೊಂದು ಏಳುಬೀಳು ಎಲ್ಲವನ್ನೂ ಮೆಟ್ಟಿನಿಂತು, ನಮ್ಮ ಎಲ್ಲ ಸಹೋದರರನ್ನು ಒಂದು ಒಳ್ಳೆಯ ಮಾರ್ಗ ದರ್ಶನ, ಜನರ ಜೊತೆ ಬೆರೆಯುವ ರೀತಿ, ಎಲ್ಲರನ್ನೂ ಸರಿದೂಗಿಸಿ ಕೊಂಡು ಹೋಗುವುದು ಹೇಗೆ ಎಂಬುವುದು ಎಲ್ಲವನ್ನೂ ನಾವು ನಾವು ನಮ್ಮ ತಂದೆಯವನ್ನ ನೋಡಿ ಕಲಿತು ಕೊಂಡಿದ್ದೇವೆ .
ಅವರು ಹೇಗೆ ನಡೆದು ಕೊಂಡು ಬಂದಿದ್ರೋ ಅದೇರೀತಿ ನಾವು ಅವರ್ ಎಲ್ಲ ಮಾರ್ಗ ದರ್ಶನದ ಮೇರೆಗೆ ನಮ್ಮ ನಡೆ ನಡೆಯುತ್ತಿದೆ, ಇಂದು ಅವರ್ ಒಂಬತ್ತನೇ ಪುಣ್ಯ ಸ್ಮರಣೆ ಅವರ್ ಆತ್ಮಕ್ಕೆ ಶಾಂತಿ ಸಿಗಲಿ, ಹಾಗೂ ಅವರು ನಮ್ಮನ್ನ ಆಗಲಿದ್ದು ಶಾರೀರಿಕವಾಗಿ ನಮ್ಮ ಮನಸಿನಲ್ಲಿ ಅವರು ಶಾಶ್ವತ ಎಂದು ಹೇಳಿದರು