ಕನ್ಹೇರಿ ಶ್ರೀ ನಿರ್ಬಂಧ ವಿಚಾರ
ವಿಜಯಪುರ ಜಿಲ್ಲಾಡಳಿತದ ನಿರ್ಧಾರ ಎತ್ತಿ ಹಿಡಿದ ಸುಪ್ರೀಂ
ವಿಜಯಪುರ ಜಿಲ್ಲೆಗೆ ನೆರೆ ರಾಜ್ಯ ಮಹಾರಾಷ್ಟ್ರ ರಾಜ್ಯದ ಕನ್ನೇರಿ ಶ್ರೀ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನೇರಿ ಸ್ವಾಮೀಜಿ ಪರ ವಕೀಲರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಆದ್ರೆ ಸುಪ್ರೀಂ ಕೋರ್ಟ್ ವಿಜಯಪುರ ಜಿಲ್ಲಾಡಳಿತದ ನಿರ್ಧಾರ ಎತ್ತಿ ಹಿಡಿದಿದೆ. ಕನ್ನೇರಿ ಶ್ರೀಗಳಿಗೆ ಮತ್ತೆ ಹಿನ್ನಡೆಯಾಗಿದೆ. ಅಕ್ಟೋಬರ್ 16 ರಿಂದ ಡಿಸೆಂಬರ್ 14ರ ವರೆಗೆ 2 ತಿಂಗಳು ಕನ್ನೇರಿ ಶ್ರೀಗಳಿಗೆ ವಿಜಯಪುರ ಜಿಲ್ಲೆಯಿಂದ ಗಡಿಪಾರು ಮಾಡಲಾಗಿತ್ತು.
BNS ಕಾಯ್ದೆ 163(3) ಪ್ರಕಾರ ಮುನ್ನೆಚ್ಚರಿಕಾ ಕ್ರಮವಾಗಿ ಕನ್ನೇರಿ ಶ್ರೀ ಜಿಲ್ಲಾ ಪ್ರವೇಶಕ್ಕೆ ವಿಜಯಪುರ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು. ಇದನ್ನು ಪ್ರಶ್ನೀಸಿ ಕನ್ನೇರಿ ಶ್ರೀಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈ ಕೋರ್ಟ್ ಕೂಡಾ ಜಿಲ್ಲಾಡಳಿತದ ನಿರ್ಬಂಧವನ್ನ ಎತ್ತಿಹಿಡಿದಿತ್ತು.
ಬಳಿಕಕನ್ನೇರಿ ಶ್ರೀ ಪರ ವಕೀಲರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈಗ ಸುಪ್ರೀಂ ಕೋರ್ಟ್ನಲ್ಲಿಯೂ ನಿರ್ಬಂಧ ಮುಂದುವರಿದಿದೆ. ಹೈಕೋರ್ಟ್ ಆದೇಶವನ್ನೆ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
Laxmi News 24×7