ಸವಲತ್ತು ರಹಿತ ವಿದ್ಯಾರ್ಥಿಗಳ ಶಿಕ್ಷಣವನ್ನು ಬೆಂಬಲಿಸಲು ಮಾಜಿ ಮೇಯರ ವಿಜಯ ಮೋರೆ ಮನವಿ
ಸಾರ್ವಜನಿಕರು ಪ್ರತಿನಿತ್ಯ ತಾವುಗಳು ಮನೆಗೆ ಕೊಂಡುಕೊಳ್ಳುವ ಪತ್ರಿಕೆಗಳನ್ನು ಹಾಳು ಮಾಡದೆ ಒಟ್ಟುಗೂಡಿಸಿ ಪ್ರತಿ ಎರಡು ತಿಂಗಳಿಗೊಮ್ಮೆ ರದ್ದಿಯನ್ನು ಶಾಂತಾಯಿ ವಿದ್ಯಾ ಆಧಾರದವರಿಗೆ ನೀಡಿದರೆ ಸೌಕರ್ಯ ವಂಚಿತ ಬಡ ವಿದ್ಯಾರ್ಥಿಗಳ ಅನುಕೂಲವಾಗುತ್ತದೆ ಎಂದು ಮಾಜಿ ಮೇಯರ ವಿಜಯ ಮೋರೆ ಹೇಳಿದರು
ಸವಲತ್ತು ರಹಿತ ವಿದ್ಯಾರ್ಥಿಗಳ ಶಿಕ್ಷಣವನ್ನು ಬೆಂಬಲಿಸಲು ಶಾಂತಾಯಿ ವಿದ್ಯಾ ಆಧಾರ್ ತನ್ನ ಕಾರ್ಯವನ್ನು ಮುಂದುವರೆಸಿದೆ ಸಂಸ್ಥೆಯು ರದ್ದಿ ಹಳೆಯ ಪತ್ರಿಕೆಗಳು ಮತ್ತು ಸ್ಕ್ರ್ಯಾಪ್ ಸಾಮಗ್ರಿಗಳು ಸಂಗ್ರಹಿಸುತ್ತದೆ, ಅದನ್ನು ಮಾರಾಟ ಮಾಡಿ ಆ ಹಣವನ್ನು ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕಕ್ಕೆ ಸಹಾಯ ಮಾಡಲು ಬಳಸುತ್ತದೆ ಗುರುವಾರ ಬೆಳಗಾವಿಯ ರಾಣಿ ಚೆನ್ನಮ್ಮ ನಗರದ ಗುರು ಪ್ರಸಾದ್ ಕಾಲೋನಿಗೆ ತಂಡ ಭೇಟಿ ನೀಡಿ ಅಲ್ಲಿನ ನಿವಾಸಿಗಳು ಪ್ರತಿ ಎರಡು ತಿಂಗಳಿಗೊಮ್ಮೆ ರದ್ದಿ ಸಂಗ್ರಹಿಸಿ ಧಾನ ಮಾಡುವ ಮೂಲಕ ಈ ಕಾರ್ಯವನ್ನು ಸಕ್ರಿಯವಾಗಿ ಬೆಂಬಲಿಸಿ ಅನೇಕ ವಿದ್ಯಾರ್ಥಿಗಳಿಗೆ ಸಕಾಲಿಕ ಶೈಕ್ಷಣಿಕ ಬೆಂಬಲವನ್ನು ಪಡೆಯಲು ಸಹಾಯ ಮಾಡಿದ್ದಾರೆ
ಮಾಜಿ ಮೇಯರ್ ವಿಜಯ್ ಮೋರೆ ಮಾತನಾಡಿ, ನಗರದಾದ್ಯಂತ ಹೆಚ್ಚಿನ ಜನರು ಮುಂದೆ ಬಂದರೆ, ಈ ಶೈಕ್ಷಣಿಕ ವರ್ಷದಲ್ಲಿ ಇನ್ನೂ ಅನೇಕ ವಿದ್ಯಾರ್ಥಿಗಳಿಗೆ ಸಹಾಯ ಮಾಡಬಹುದು ಬೆಳಗಾವಿ ನಿವಾಸಿಗಳು ತಮ್ಮ ಮನೆಯಲ್ಲಿಮ ರದ್ದಿಯನ್ನು ಧಾನ ಮಾಡುವ ಮೂಲಕ ಮಿಷನ್ಗೆ ಸೇರಲು ಮನವಿ ಮಾಡಿದರು
ವಿ.ಎಲ್. ಕುಲಕರ್ಣಿ, ಗಂಗಾಧರ ಪಾಟೀಲ್, ಅಲನ್ ವಿಜಯ್ ಮೋರೆ, ವಿನಾಯಕ್ ಬೊಂಗಾಲೆ, ವಿಶ್ವಾಸ್ ಪಾಟೀಲ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು
Laxmi News 24×7