ಸಿಎ ಪಾಸ್ ಮಾಡಿದ ಕೂಲಿ ಕಾರ್ಮಿಕನ ಮಗ ರಮೇಶ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹಳ್ಳಿಕಾನಿನ ರಮೇಶ್ ನಾಯ್ಕ ಪ್ರತಿಷ್ಠಿತ “𝗜𝗻𝘀𝘁𝗶𝘁𝘂𝘁𝗲 𝗼𝗳 𝗖𝗵𝗮𝗿𝘁𝗲𝗿𝗲𝗱 𝗔𝗰𝗰𝗼𝘂𝗻𝘁𝗮𝗻𝘁𝘀 𝗼𝗳 𝗜𝗻𝗱𝗶𝗮” ಮೇ 2025 ರಲ್ಲಿ ನೆಡೆಸಿದ ಅಂತಾರಾಷ್ಟ್ರಿಯ ಮಟ್ಟದ CA ಅಂತಿಮ ಹಂತದ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ.
ಇವರು ಮಂಜುನಾಥ ಹಾಗೂ ಶಾರದಾ ದಂಪತಿಗಳ ಮಗನಾಗಿದ್ದು ಅವಿದ್ಯಾವಂತರಾದ ತಂದೆ ತಾಯಿ ಇಬ್ಬರು ದಿನಗೂಲಿ ಕೆಲಸ ಮಾಡುತ್ತಾರೆ. ಚಿಕ್ಕ ಅರಣ್ಯ ಭೂಮಿಯಲ್ಲಿ ವಾಸಿಸುವ ಇವರು ಯಾವದೇ ಸ್ವಂತ ಜಮೀನು ಹೊಂದಿಲ್ಲ.
ರಮೇಶ ತೀರಾ ಕಡು ಬಡತನದ ಪರಿಸ್ಥಿಯಲ್ಲೂ ದ್ರತಿಗೆಡದೆ ಮನೆಯಲ್ಲಿಯೇ ಛಲದಿಂದ ಓದಿ ಅತೀ ಕಷ್ಟಕರ ಪರೀಕ್ಷೆಯಲ್ಲಿ ಒಂದಾದ 𝗖𝗔 ಎಲ್ಲ ಹಂತದ ಪರೀಕ್ಷೆ ಪಾಸ್ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾನೆ.