ಬೆಂಗಳೂರು : ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆಡಳಿತ ಪಕ್ಷದ ಶಾಸಕರ ಹೇಳಿಕೆಗೆ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ವಿಧಾನಸೌಧದಲ್ಲಿ ಇಂದು ಪ್ರತಿಕ್ರಿಯೆ ನೀಡಿದ್ದಾರೆ.
ಜೆಡಿಎಸ್ ಶಾಸಕ ಎ. ಮಂಜು ಮಾತನಾಡಿ, ಈಗಾಗಲೇ ಕಾಂಗ್ರೆಸ್ ಶಾಸಕ ಬಿ. ಆರ್. ಪಾಟೀಲ್ ಅವರು ಒಂದು ರೀತಿಯಲ್ಲಿ ಮಾತನಾಡಿದ್ದಾರೆ. ಬಿ. ಆರ್. ಪಾಟೀಲ್ ಅವರ ಮಾದರಿಯಲ್ಲೇ ಶಾಸಕ ರಾಜು ಕಾಗೆ ಹೇಳಿದ್ದಾರೆ. ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿದೆ. ಅದರ ಬಗ್ಗೆ ನನಗೂ ಮಾಹಿತಿ ಬಂದಿದೆ. ಇದರಲ್ಲಿ ಫಲಾನುಭವಿಗಳಿಗೆ ಮೋಸ ಆಗುತ್ತಿದೆ ಎಂದು ಹೇಳಿದರು.ನಮ್ಮ ಕ್ಷೇತ್ರದಲ್ಲಿ ಕೇವಲ 12 ಪಂಚಾಯತಿಗಳಿಗೆ ಮನೆ ಕೊಟ್ಟಿದ್ದಾರೆ. 2016-17 ರಲ್ಲಿ ಏನು ಪಟ್ಟಿ ತಯಾರಿ ಆಗಿತ್ತು. ಅವರಿಗೆ ಕೊಡಬೇಕು ಅಂತಾ ಹೇಳಲಾಗಿತ್ತು.
ಅವರಲ್ಲೇ ಇದೀಗ ಜಗಳ ಶುರುವಾಗುತ್ತಿದೆ. ಕೂಡಲೇ ಇಲಾಖೆಯಲ್ಲಿ ಆಗಿರುವ ಅನ್ಯಾಯ ಸರಿಪಡಿಸಬೇಕು. ಫಲಾನುಭವಿಗಳಿಗೆ ಅನ್ಯಾಯ ಆಗಬಾರದು. ಹಿಂದೆ ಏನು ಕಾನೂನು ಮಾಡಿದ್ದಾರೆ. ಅದರ ಮೂಲಕ ಎಲ್ಲವೂ ಆಗಬೇಕು ಎಂದು ಒತ್ತಾಯಿಸಿದರು.ಎಲ್ಲ ಇಲಾಖೆಯಲ್ಲಿ ಇದು ನಡೀತಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಮೊದಲು ಇದ್ದ ಗಂಭೀರತೆ ಈಗಿಲ್ಲ. ಅವರು ಮೊದಲು ಸೀರಿಯಸ್ಸಾಗಿ ಕೆಲಸ ಮಾಡಲಿ ಎಂದು ಮನವಿ ಮಾಡುತ್ತೇನೆ. ಯಾರೇ ಫಲಾನುಭವಿಗಳಿಗೆ ಮೋಸ ಆಗಬಾರದು ಎಂದು ಹೇಳಿದರು.
Laxmi News 24×7