ಬಾಗಲಕೋಟೆ : ಮುಧೋಳ ಕ್ಷೇತ್ರದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಮರಳು ದಂಧೆ
ಬಾಗಲಕೋಟೆ ಜಿಲ್ಲೆ ಮುಧೋಳ ಕ್ಷೇತ್ರದಲ್ಲಿ ಅಕ್ರಮ ಮರಳುಗಾರಿಕೆ ಮಾಫಿಯಾ ದಂಧೆ ನಡೆಯುತ್ತಿದ್ದು ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ದಂಧೆಗೆ ಕಡಿವಾಣ ಹಾಕುವವರು ಇಲ್ಲದಂತಾಗಿದೆ
ಬಾಗಲಕೋಟೆ ಜಿಲ್ಲೆ ಮುಧೋಳ ಕ್ಷೇತ್ರದಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ಹಿಡಿಯುತ್ತಿದೆ ಉಸ್ತುವಾರಿ ಸಚಿವ ಆರ.ಬಿ.ತಿಮ್ಮಾಪುರ ಸ್ವಕ್ಷೇತ್ರದಲ್ಲಿಯೇ ಅಕ್ರಮ ಮರಳು ದಂಧೆ ನಿರಂತರವಾಗಿ ನಡೆಯುತ್ತಿದೆ ಮುಧೋಳ ತಾಲೂಕಿನ ರೂಗಿ ಗ್ರಾಮದ ಬಳಿಘಟಪ್ರಭಾ ನದಿಯ ಮರುಳನ್ನು ಮಾಫಿಯಾ ದಂಧೆಕೋರರು ಬಗೆದು ಹಗಲು ದರೋಡೆ ನಡೆಸಿದ್ದಾರೆ
.
ನದಿಯಲ್ಲಿ ಬೋಟ್ ಮೂಲಕ ಮರಳು ದಡದಲ್ಲಿ ಡಂಪ್ ಮಾಡಿ ಜೆಸಿಬಿ,ಟಿಪ್ಪರಗಳ ಮೂಲಕ
ಅಕ್ರಮ ಮರಳು ಸಾಗಾಟ ಮಾಡುತ್ತಿದ್ದಾರೆ ಇಷ್ಟೆಲ್ಲ ನಡೆಯುತ್ತಿದೆ ಎಂದರೆ
ಅಕ್ರಮ ಮರಳು ದಂಧೆಯಲ್ಲಿ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳೂ ಸಹ ಭಾಗಿಯಾಗಿರುವ ಶಂಕೆ ಮೂಡುತ್ತಿದೆ.
ರಾಜಾರೋಷವಾಗಿ ಮರಳುಗಾರಿಕೆ ನಡೆಸುತ್ತಿರುವುದೇ ಬ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ
ಅಕ್ರಮ ಮರಳು ದಂಧೆ ಕಂಡರೂ ಕಣ್ಮುಚ್ಚಿ ಕುಳಿತ ಮುಧೋಳ ಪೊಲೀಸ್ರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಅಕ್ರಮ ಮರಳು ದಂಧೆ ಕೋರರ ಎಂಜಲಕ್ಕೆ ಬಾಯಿ ಒಡ್ಡಿದ್ರಾ ಎಂಬ ಅನುಮಾನ ಮೂಡದೆ ಇರದು. ಇನ್ನಾದರೂ ಈ ಅಕ್ರಮ ದಂಧೆಗೆ ಕಡಿವಾಣ ಬೀಳುತ್ತೋ ಹೇಗೋ ಕಾದು ನೋಡಬೇಕು
Laxmi News 24×7