ಹೊಲಸೇಲನಲ್ಲಿ ಸಿಗರೇಟು ಬೇಡಿದ್ದನ್ನ ನಿರಾಕರಿಸಿದ್ದಕ್ಕೆ ದಲಿತ ಯುವಕನ ಮೇಲೆ ಗ್ರಾಮ ಪಂಚಾಯತ ಉಪಾದಕ್ಷನಿಂದ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದಲ್ಲಿ ನಡೆದಿದೆ.
ಪಿಯುಸಿ ಪಲಿತಾಂಶ ಬಂದ ನಂತರ ಕಾಲೇಜು ಪ್ರಾರಂಬ ಆಗುವ ತನಕ ಕೈಯಲ್ಲಿ ಹಣ ಮಾಡಬೇಕು ಎಂಬ ಉದ್ದೇಶದಿಂದ ಚಹಾ ಅಂಗಡಿಯಲ್ಲಿ ಕೆಲಸ ಮಾಡಲು ಮಿರ್ಜಿ ಗ್ರಾಮದಿಂದ ಯಾದವಾಡ ಗ್ರಾಮಕ್ಕೆ ಬಂದಿದ್ದ ಪ್ರಜ್ವಲ ದೊಡಮನಿ ಎಂಬಾತನೆ ಹಲ್ಲೆಗೊಳಗಾದ ವ್ಯಕ್ತಿ ಎಂದು ತಿಳಿದು ಬಂದಿದ್ದು ಹ*ಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ.
ದಿ: 15 ರಂದು ರಾತ್ರಿ ಯಾದವಾಡದಲ್ಲಿರುವ ಚಹಾ ಅಂಗಡಿಗೆ ಅಲ್ಲಿನ ಗ್ರಾಮ ಪಂಚಾಯತ ಉಪಾದಕ್ಷ ಕಲ್ಮೇಶ ಗಾಣಿಗೇರ ತನ್ನ ಸಹಚರರ ಜೊತೆ ಬಂದು ಹೊಲಸೇಲದಲ್ಲಿ ಸಿಗರೇಟು ಬೇಡಿದ್ದಾನೆ, ಆಗ ಪ್ರಜ್ವಲ ಇತ ಹೊಲಸೇಲದಲ್ಲಿ ಕೊಡೊಕೆ ಆಗೊಲ್ಲ ಅಂದಿದ್ದಕ್ಕೆ ಕಲ್ಮೇಶ ಗಾಣಿಗೇರ ಇತ ಪ್ರಜ್ವಲನಿಗೆ ಅವಾಚ್ಯ ಶ*ಬ್ದಗಳಿಂದ ಬೈದು ನಿಂದಿಸಿದ್ದಾನೆ,
Laxmi News 24×7