ಬೆಳಗಾವಿಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ.
ಜಾತಿ ಗಣತಿ ವರದಿ ಆಂಕಿ ಅಂಶ ವರದಿ ಬಿಡುಗಡೆ.
ಈಗತಾನೇ ಒಪನ್ ಆಗಿದೆ.
ಈಗ ಒಂದು ಕಾಪಿಯನ್ನು ನನಗೆ ಕಳುಹಿಸಿದ್ದಾರೆ.
ನಾವೇಲ್ಲ ನೋಡ್ತಿವಿ, ಆತುರದ ಕ್ರಮ ಇಲ್ಲ.
ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ಕೈಗೊಳ್ಳುತ್ತೇವೆ.
ಏನಾದ್ರು ಲೋಪದೋಷ ಇದ್ರೆ ಅದನ್ನು ಸರಿ ಮಾಡುತ್ತೇವೆ.
ನಮ್ಮ ಪಕ್ಷದ ಮೂಲ ಸಿದ್ಧಾಂತ ಎಲ್ಲರಿಗೂ ಸಮಪಾಲು, ಸಮಬಾಳು.
ನಮ್ಮದು ಬಸವಣ್ಣನ ತತ್ವನ ಮೇಲೆ ಕೆಲಸ ಮಾಡ್ತಿವಿ.
ಆರ್ ಅಶೋಕ ಆರೋಪಕ್ಕೆ ನಾನು ಉತ್ತರ ಕೊಡಲ್ಲ.
ಅವರಿಗೆ ವಕ್ತಾರ ನಾನು ಆಗೋಕೆ ಇಷ್ಟ ಇಲ್ಲ.
ನಮ್ಮ ಸರ್ಕಾರ ವಕ್ತಾರ ನಾನು ಆಗುತ್ತೇನೆ.
ಜಾತಿ ಗಣತಿಯನ್ನು ನಾನು ಓದೇ ಇಲ್ಲ.
ಚುನಾವಣೆ ಪ್ರಣಾಳಿಕೆಯಲ್ಲಿ ಸಾಮಾಜಿಕ, ಆರ್ಥಿಕ ಅಧ್ಯಯನ ವರದಿ ಜಾರಿ ಎಂದು ಹೇಳಿದ್ದೇನೆ.
ಜಾತಿ ಗಣತಿ ಮಾಡೋ ಅಧಿಕಾರ ಇರೋದು ಕೇಂದ್ರಕ್ಕೆ ಮಾತ್ರ.
ಯಾರಿಗೆ ಅನ್ಯಾಯ ಆಗಿದೆ ಅವರನ್ನು ನ್ಯಾಯ ಕೊಡಿಸುತ್ತೇವೆ.
ಎನಾದ್ರು ಆತಂಕ ಇದ್ರೆ ಅದನ್ನು ಸರಿ ಪಡಿಸುತ್ತೇವೆ.
ವಿರೋಧ ಪಕ್ಷದ ನಾಯಕರು ಏನ್ ಹೇಳಬಹುದು ಅ
ದನ್ನು ನಾರಾಯಣಸ್ವಾಮಿ ಹೇಳಿದ್ದಾರೆ.
ಬಿಜೆಪಿ ಜನಾಕ್ರೋಶ ಯಾತ್ರೆ ಹೆಸರು ಪರಿವರ್ತನೆ ಮಾಡಬೇಕು.
ತಾವು ಏನ್ ಏನ್ ಬೆಲೆ ಏರಿಕೆ ಮಾಡಿದೀರಿ ನೋಡಿ ಒಮ್ಮೆ.
ಸಿಮೆಂಟ್, ಪೆಟ್ರೋಲ್ ಸೇರಿ ಎಲ್ಲಾ ಬೆಲೆ ಏರಿಕೆ ಮಾಡಿದೆ.
ಚಿನ್ನ ಈಗ ಕೊಂಡುಕೊಳ್ಳಲು ಆಗದ ಪರಿಸ್ಥಿತಿ ಬಂದಿದೆ.
ಎಲ್ಲಾ ಬೆಲೆ ಏರಿಕೆಗೆ ಬಿಜೆಪಿ ಕಾರಣ.
ಏಪ್ರಿಲ್17ರಂದು ಜನಾಕ್ರೋಶ ಯಾತ್ರೆ ಮಾಡ್ತಿವಿ.
ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ.
ಯಾವುದಕ್ಕೂ ಆಧಾರ ಇಲ್ಲ, ಸತ್ಯನು ಅಲ್ಲ.
Laxmi News 24×7