ಖಾನಾಪೂರ ತಾಲೂಕಿನಲ್ಲಿ ಸರಣಿ ಮನೆಗಳ್ಳತನಬೆಚ್ಚಿ ಬಿದ್ದ ಗ್ರಾಮಸ್ಥರು
ಖಾನಾಪೂರ ತಾಲೂಕಿನಲ್ಲಿ ಸರಣಿ ಮನೆಗಳ್ಳತನದಿಂದಾಗಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಖಾನಾಪೂರ ತಾಲೂಕಿನ ಭಂಡರಗಾಳಿ,ಬರಗಾಂವ, ಸಣ್ಣ ಹೊಸೂರು, ಗರ್ಲಗುಂಜಿ, ಶೇಡೆಗಾಳಿಯಲ್ಲಿ ಕಳ್ಳರು ಮನೆಗಳ ಬೀಗ್ ಮುರಿದು ತನ್ನ ಕೈಚಳಕ ತೋರಿಸಿ ಬೆಲೆ ಬಾಳುವ ವಸ್ತುಗಳನ್ನು ಕದ್ದೋಯ್ದ ಘಟನೆ ನಡೆದಿದೆ.
ಬರಗಾಂವದಲ್ಲಿ ನಾಲ್ಕು ಮನೆಗಳ ಬೀಗಗಳನ್ನು ಮುರಿದ ಕಳ್ಳರು, ಭಂಡರಗಾಳಿಯಲ್ಲಿ ಒಂದು ಮನೆ, ಸಣ್ಣ ಹೊಸೂರಿನಲ್ಲಿ ಎರಡು ಮನೆಗಳನ್ನು ಕಳ್ಳತನ ಮಾಡಿದ್ದಾರೆ.
ಆಯಾ ಮನೆಗಳಲ್ಲಿ ಎಷ್ಟು ಕಳ್ಳತನವಾಗಿದೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ದೊರೆತಿಲ್ಲ.
ಇದರಲ್ಲಿ ಮಾರುತಿ ದೇಸಾಯಿ ಅವರ ಮನೆಯಿಂದ ಎರಡುವರೆ ತೊಲೆ ಚಿನ್ನದ ಮಾಂಗಲ್ಯ ಸರವನ್ನು ಕಳುವು ಮಾಡಿರುವ ಮಾಹಿತಿ ದೊರೆತಿದೆ. ಆದರೇ, ಇಲ್ಲಿಯವರೆಗೂ ಖಾನಾಪೂರ ಪೋಲಿಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲವೆಂದು ಹೇಳಲಾಗಿದೆ.
Laxmi News 24×7