ದಾವಣಗೆರೆ, (ಮಾರ್ಚ್ 03): ಈಗಾಗಲೇ ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು, ಇಂದು (ಮಾರ್ಚ್ 03) ಸೈನ್ಸ್ ವಿಭಾಗದ ಮ್ಯಾಥ್ಸ್(ಗಣಿತ) ಪರೀಕ್ಷೆ ಇತ್ತು. ಪರೀಕ್ಷೆಯಲ್ಲಿ ಮೇಲ್ವಿಚಾರಕ ವಿದ್ಯಾರ್ಥಿನಿಗೆ ಹೆಚ್ಚುವರಿ ಉತ್ತರ ಪತ್ರಿಕೆ ನೀಡದ ಆರೋಪ ಕೇಳಿಬಂದಿದೆ.
ದಾವಣಗೆರೆ ಜಿಲ್ಲೆ ಜಗಳೂರಿನ ಮಾಲತಿ ಪಿಯು ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಜಗಳೂರಿನ ನಳಂದ ಕಾಲೇಜಿನ ಪಿಯು ವಿದ್ಯಾರ್ಥಿನಿ ಸೌಜನ್ಯ, ಹೆಚ್ಚುವರಿ ಉತ್ತರ ಪತ್ರಿಕೆ(ಎಡಿಷನಲ್ ಶೀಟ್) ನೀಡುವಂತೆ ಮೇಲ್ವಿಕಾರಕನಿಗೆ ಕೇಳಿದ್ದಾಳೆ.
ಆದ್ರೆ, ಮೇಲ್ವಿಚಾರಕ ಎಡಿಷನಲ್ ಶೀಟ್ ನೀಡಲು ನಿರಾಕರಿಸಿದ್ದಾನೆ. ಇದರಿಂದ ಸೌಜನ್ಯ 7 ಅಂಕಗಳಿಗೆ ಉತ್ತರ ಬರೆಯುವುದನ್ನು ಬಿಟ್ಟು ಬಂದಿದ್ದಾಳೆ.
ಅಲ್ಲದೇ ಪರೀಕ್ಷೆ ಬಳಿಕ ತನ್ನ ತಾಯಿ ಹತ್ತಿರ ಬಂದು ಹೇಳಿ ಕಣ್ಣೀರಿಟ್ಟಿದ್ದಾಳೆ. ಇನ್ನು ಮಗಳಿಗೆ ಆದ ಅನ್ಯಾಯಕ್ಕೆ ತಾಯಿಯೂ ಸಹ ಗಳಗಳನೇ ಅತ್ತಿದ್ದಾರೆ.
Laxmi News 24×7