Breaking News

ವರುಣನ ಅಬ್ಬರ. ಕೆರೆಯಂತಾದ ಪೊಲೀಸ್ ಠಾಣೆ

Spread the love

ಚಿತ್ರದುರ್ಗ: ಚಿತ್ರದುರ್ಗದಲ್ಲಿ ಸೋಮವಾರ (ಅ.21) ತಡರಾತ್ರಿ ವರುಣನ ಅಬ್ಬರ ಜೋರಾಗಿದ್ದು ಠಾಣೆಯೊಳಗೆ ಅಪಾರ ಪ್ರಮಾಣದ ನೀರು ನುಗ್ಗಿ ನಾಯಕನಕಟ್ಟೆ ಪೊಲೀಸ್ ಠಾಣೆ ಕೆರೆಯಂತಾಗಿದೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಾದ್ಯಂತ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ.

 

ಪೊಲೀಸ್ ಠಾಣೆಯೊಳಗೆ ನೀರು ನುಗ್ಗಿದ ಪರಿಣಾಮ ಕೆಲವು ದಾಖಲೆಗಳು ನೀರುಪಾಲಾಗಿದೆ, ಅಲ್ಲದೆ ಠಾಣೆ ಒಳಗಿನ ಲಾಕಪ್, PSI ರೂಂ, ಕಂಪ್ಯೂಟರ್‌ ರೂಮ್ ಗಳಿಗೆ ನೀರು ನುಗ್ಗಿದೆ.

ಬೆಳಿಗ್ಗೆಯಿಂದ ಮಳೆ ನೀರು ಹೊರ ಹಾಕಲು ಪೊಲೀಸರು ಹೈರಾಣಾಗಿದ್ದಾರೆ.


Spread the love

About Laxminews 24x7

Check Also

ಚೈನೀಸ್ ಫುಡ್ ಅಂಗಡಿಗಳಲ್ಲಿ ಟೆಸ್ಟಿಂಗ್ ಪೌಡರ್ ಬಳಕೆ ವಿರುದ್ಧ ಧ್ವನಿ ಸಂಘಟನೆ ಆಕ್ರೋಶ

Spread the loveವಿಷಕಾರಿ ರಾಸಾಯನಿಕ ಬಳಕೆ ನಿಲ್ಲಿಸುವಂತೆ ಅಂಗಡಿ ಮಾಲೀಕರಿಗೆ ಎಚ್ಚರಿಕೆ ಹುಕ್ಕೇರಿ ಪಟ್ಟಣದ ಚೈನೀಸ್ ಫುಡ್ ಅಂಗಡಿಗಳಲ್ಲಿ ಟೆಸ್ಟಿಂಗ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ