ಬೆಂಗಳೂರು, ನ.22- ಮರಾಠ ಅಭಿವೃದ್ಧಿ ನಿಗಮದ ವಿರುದ್ಧ ರಾಜ್ಯ ಬಂದ್ಗೆ ಕರೆ ಕೊಟ್ಟಿರುವ ಹಿನ್ನಲೆಯಲ್ಲಿ ಕನ್ನಡಪರ ಸಂಘಟನೆಗಳಿಗೆ ರಾಜ್ಯೋತ್ಸವ ಆಚರಣೆಗೆ ನೀಡುತ್ತಿದ್ದ ಅನುದಾನವನ್ನು ತಡೆಹಿಡಿಯುವ ಮೂಲಕ ಬಂದ್ ವಿಫಲಗೊಳಿಸುವ ಷಡ್ಯಂತ್ರವನ್ನು ರಾಜ್ಯಸರ್ಕಾರ ಮಾಡುತ್ತಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ಹಾಗೂ ಕನ್ನಡ ಒಕ್ಕೂಟದ ಮುಖಂಡ ವಾಟಾಳ್ ನಾಗರಾಜ್ ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯೋತ್ಸವದೊಂದು ಕರಾಳ ದಿನಾಚರಣೆ ಮಾಡುವ ಮರಾಠಿಗರಿಗೆ ಮರಾಠ ಅಭಿವೃದ್ಧಿ ಪ್ರಾಕಾರ ಅದಕ್ಕೆ 50 ಕೋಟಿ ಅನುದಾನ. ಪ್ರತಿದಿನ ಕನ್ನಡದ ಉಳಿವಿಗಾಗಿ ಹೋರಾಡಿ ನಾಡು-ನುಡಿ, ಸಂಸ್ಕøತಿ, ನೆಲ- ಜಲಕ್ಕಾಗಿ ಬಡಿದಾಡುವ ಕನ್ನಡ ಸಂಘಟನೆಗಳಿಗೆ ಅನುದಾನ ಕಡಿತ. ಇದು ಯಾವ ನ್ಯಾಯ.
ಕನ್ನಡ ಚಳವಳಿ ವಾಟಾಳ್ ನಾಗರಾಜ್ ಅವರ ಆಕ್ರೋಶ ಭರಿತ ಮಾತು. ಮರಾಠ ಅಭಿವೃದ್ಧಿ ಪ್ರಾಕಾರ ರಚನೆ ಮಾಡಿದ ಸರ್ಕಾರ ಕಾನೂನು ತೊಡಕಿನ ಹಿನ್ನೆಲೆಯಲ್ಲಿ ಅದನ್ನು ನಿಗಮವಾಗಿ ಬದಲಾಯಿಸಿ ಮರಾಠಿ ಪರ ಧೋರಣೆ ಅನುಸರಿಸುತ್ತಿದೆ. ಇದನ್ನು ವಿರೋಸುವ ಕನ್ನಡಪರ ಸಂಘಟನೆಗಳಿಗೆ ನೀಡುತ್ತಿದ್ದ ಅನುದಾನವನ್ನು ಕಡಿತ ಮಾಡುವ ಮೂಲಕ ಬ್ಲಾಕ್ಮೇಲ್ ರಾಜಕಾರಣ ಮಾಡುತ್ತಿದೆ. ಇದಕ್ಕೆ ನಾವು ಸೊಪ್ಪು ಹಾಕುವುದಿಲ್ಲ ಕನ್ನಡಪರ ಹೋರಾಟವನ್ನು ನಿತ್ಯ ನಿರಂತರವಾಗಿ ಮಾಡುತ್ತೇವೆ. ಮುಂದೆಯೂ ಮಾಡುತ್ತೇವೆ ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ 2000ಕ್ಕೂ ಹೆಚ್ಚು ಸಂಘಟನೆಗಳಿಗೆ ಅನುದಾನ ನೀಡಲಾಗುತ್ತಿದೆ. ಹೋರಾಟವನ್ನು ತೀವ್ರಗೊಳಿಸಿರುವ ಸಂದರ್ಭದಲ್ಲಿ ವಾಟಾಳ್ ನಾಗರಾಜ್ ಮುಜುಗರ ತರಲು ಅನುದಾನ ವಿಷಯವನ್ನು ಮುಂದೆ ತಂದಿದ್ದಾರೆ. ರಾಜ್ಯೋತ್ಸವಕ್ಕಾಗಿ ಇಲಾಖೆ ಅನುದಾನ ನೀಡಿದೆ. ವಾಟಾಳ್ ನಾಗರಾಜ್ ಮಗನ, ಮಗಳ ಮದುವೆಗಾಗಿ ಅಲ್ಲ, ಮನೆ ಕಟ್ಟಲು ಅಲ್ಲ ಎಂದು ಹೇಳಿದರು.