ಮಾಲ್ಕನ್ಗಿರಿ: ಒಡಿಶಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ 5 ಲಕ್ಷ ಜನರಿಗೆ ಅಯೋಧ್ಯೆಯ ರಾಮ ಮಂದಿರದ ದರ್ಶನ ಒದಗಿಸಲಾಗುವುದು ಎಂದು ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ. ಇಲ್ಲಿನ ಕಾಲಿಮೇಳದಲ್ಲಿ ಚುನಾವಣ ರ್ಯಾಲಿಯಲ್ಲಿ ಮಾತನಾಡಿ, ಅಸ್ಸಾಂನಲ್ಲಿ ರಾಜ್ಯ ಸರಕಾರದ ಖರ್ಚಿನಲ್ಲೇ 1 ಲಕ್ಷ ಜನರನ್ನು ಅಯೋಧ್ಯೆಗೆ ಕರೆದೊಯ್ಯಲು ನಿರ್ಧರಿಸಿದ್ದೇನೆ.
ಒಡಿಶಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನೂತನ ಬಿಜೆಪಿ ಸಿಎಂ ಈ ತೀರ್ಥಯಾತ್ರೆ ಸೌಲಭ್ಯ ಒದಗಿಸುತ್ತಾರೆ ಎಂದು ತಿಳಿಸಿದರು.ಬಂಗಾಲಿ ಶಿಕ್ಷಕರ ನೇಮಕ, ಗ್ರಾಮಗಳ ಮರು ನಾಮಕರಣ ಬಿಜೆಪಿಯ ಗ್ಯಾರಂಟಿ ಎಂದು ತಿಳಿಸಿದರು.